ಸೋಪುರ್ನಲ್ಲಿ ಗ್ರೆನೇಡ್ ದಾಳಿ: ಮೂವರು ಗಂಭೀರ;ಉಗ್ರನ ಹತ್ಯೆ
Team Udayavani, Sep 24, 2017, 11:11 AM IST
ಶ್ರೀನಗರ : ಸೋಪುರ್ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಉಗ್ರರು ಅಟ್ಟಹಾಸಗೈದಿದ್ದು ಗ್ರೆನೇಡ್ ದಾಳಿ ನಡೆಸಿದ್ದಾರೆ . ದಾಳಿಯಲ್ಲಿ ಮೂವರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ಕಾಲ್ಗಾಯ್ ಪ್ರದೇಶಲ್ಲಿ ಸೇನಾ ಪಡೆಗಳು ಉಗ್ರರ ಅಡಗುತಾಣದ ಮೇಲೆ ಕಾರ್ಯಾಚರಣೆ ನಡೆಸಿ ಓರ್ವ ಉಗ್ರನನ್ನು ಹತ್ಯೆಗೈದಿವೆ.
ಬೆಳಗಿನ ಜಾವ ಉಗ್ರರ ಇರುವಿಕೆಯ ಖಚಿತ ಮಾಹಿತಿ ಪಡೆದು ಸುತ್ತುವರಿದ ಸೇನಾ ಪಡೆಗಳು ಭಾರೀ ಗುಂಡಿನ ಚಕಮಕಿ ನಡೆಸಿವೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಹೆಚ್ಚು ವರಿ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.