ಮಾನನಷ್ಟ ಮೊಕದ್ದಮೆ ಪ್ರಕರಣ : ಪತ್ರಕರ್ತೆ ಪ್ರಿಯಾ ಖುಲಾಸೆ..!

"ದಶಕಗಳ ನಂತರವೂ ತನ್ನ ಸಮಸ್ಯೆಯನ್ನು ತಿಳಿಸುವ ಹಕ್ಕು ಮಹಿಳೆಗೆ ಇದೆ" : ದೆಹಲಿ ನ್ಯಾಯಾಲಯ

Team Udayavani, Feb 17, 2021, 6:52 PM IST

Journalist Priya Ramani acquitted in MJ Akbar criminal defamation case

ನವ ದೆಹಲಿ :  ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಪತ್ರಕರ್ತೆ ಪ್ರಿಯಾ ರಮಣಿಯನ್ನು ಖುಲಾಸೆಗೊಳಿಸಿದೆ.

ರಮಣಿ ವಿರುದ್ಧ ಯಾವುದೇ ಮಾನಹಾನಿ ದೂರು ಸಾಬೀತಾಗಿಲ್ಲ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಹೇಳಿದರು.

ಓದಿ : ಮಗುವನ್ನು ದತ್ತು ನೀಡಲು ನಿರಾಕರಿಸಿದ ಪತ್ನಿಗೆ ಕಿರುಕುಳ: ಪತಿ ಸೇರಿ 6 ಮಂದಿಯ ವಿರುದ್ಧ FIR

“ದಶಕಗಳ ನಂತರವೂ ತನ್ನ ಸಮಸ್ಯೆಯನ್ನು ತಿಳಿಸುವ ಹಕ್ಕು ಮಹಿಳೆಗೆ ಇದೆ”  “ಮಾನಹಾನಿಯ ದೂರಿನ ನೆಪದಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಮಹಿಳೆಯರಿಗೆ ಶಿಕ್ಷೆಯಾಗಲು ಸಾಧ್ಯವಿಲ್ಲ. ಮಹಿಳೆಗೆ ತನಗಾದ ಸಮಸ್ಯೆಯನ್ನು ತನ್ನ ಆಯ್ಕೆಯ ಯಾವುದೇ ವೇದಿಕೆಯಲ್ಲಿ ಮತ್ತು ದಶಕಗಳ ನಂತರವೂ ದಾಖಲಿಸುವ ಹಕ್ಕಿದೆ.” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಿಯಾ ರಮಣಿ ಅವರು 2017 ರಲ್ಲಿ ಬರೆದ ಲೇಖನವೊಂದರಲ್ಲಿ ಮತ್ತು 2018 ರಲ್ಲಿ ಟ್ವೀಟ್‌ ಮಾಡಿದ ಪೋಸ್ಟ್ ನಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದರ ಮೂಲಕ ತಮ್ಮ “ಖ್ಯಾತಿಗೆ” ಹಾನಿ ಮಾಡಿದ್ದಾರೆ ಎಂದು ಎಂ.ಜೆ.ಅಕ್ಬರ್ ತಮ್ಮ ಮಾನಹಾನಿ ಮೊಕದ್ದಮೆಯಲ್ಲಿ ಹೇಳಿಕೊಂಡಿದ್ದರು.

ರಮಣಿ, ಅಕ್ಬರ್‌ಗೆ ಪ್ರತಿರೋಧ ನೀಡುವುದರ ಮೂಲಕ, “ಸತ್ಯ ನನ್ನ ರಕ್ಷಣೆ” ಎಂದು ಹೇಳಿದರು. ಕೆಲಸದ ಸ್ಥಳದಲ್ಲಿ ಆದ ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡಿದ ಎಲ್ಲ ಮಹಿಳೆಯರ ಪರವಾಗಿ ನನ್ನ ಸಮರ್ಥನೆ ಇದೆ  ಎಂದು ಹೇಳಿದರು.

ಓದಿ : ವಾಟ್ಸ್ಯಾಪ್ ನಲ್ಲಿ ಅತಿ ಶೀಘ್ರದಲ್ಲಿ ಬರಲಿದೆ “ಲಾಗ್ ಔಟ್” ಆಪ್ಶನ್..!

ನಿಮ್ಮ ಸತ್ಯವನ್ನು ನ್ಯಾಯಾಲಯದ ಮುಂದೆ ಮೌಲ್ಯೀಕರಿಸುವುದು ಬಹಳ ಸಂತೋಷವಾಗುತ್ತದೆ ಎಂದು ತನ್ನ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಅಕ್ಬರ್ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರ ತೀರ್ಪಿನ ಬಗ್ಗೆ ರಮಣಿ ಪ್ರತಿಕ್ರಿಯಿಸಿದರು.

ತೀರ್ಪಿನ ಬಗ್ಗೆ ನಾನು ನ್ಯಾಯಾಲಯಕ್ಕೆ ಧನ್ಯವಾದ ಹೇಳುತ್ತೇನೆ ಮತ್ತು ನನ್ನ ವಕೀಲ ರೆಬೆಕಾ ಜಾನ್ ಅವರಿಗೆ ಮತ್ತು ನನ್ನ ಮೇಲೆ ಅಪಾರ ನಂಬಿಕೆ ಇಟ್ಟ ನನ್ನ ಅದ್ಭುತ ತಂಡಕ್ಕೆ  ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು  ಪ್ರಿಯಾ ರಮಣಿ ಹೇಳಿದ್ದಾರೆ.

2018ರಲ್ಲಿ  #MeToo ಆಂದೋಲನದಲ್ಲಿ ರಮಣಿ, ಅಕ್ಬರ್ ವಿರುದ್ಧ ಲೈಂಗಿಕ ದುರುಪಯೋಗದ ಆರೋಪವನ್ನು ಹೊರಿಸಿದ್ದರು. ಅಕ್ಬರ್ ಅವರು, ದಶಕಗಳ ಹಿಂದೆ ಲೈಂಗಿಕ ದುರುಪಯೋಗವಾಗಿದೆ ಎಂದು ಆರೋಪ ಹೊರಿಸಿದ್ದ ರಮಣಿ ವಿರುದ್ಧ ಅಕ್ಟೋಬರ್ 15, 2018 ರಂದು ದೂರು ದಾಖಲಿಸಿದ್ದರು.

ಓದಿ : ಒಂದು ವೇಳೆ ರಾಹುಲ್ ದಲಿತ ಯುವತಿಯನ್ನು ವಿವಾಹವಾದ್ರೆ…ಸಚಿವ ಅಠಾವಳೆ ಆಫರ್!

 

 

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.