ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!
Team Udayavani, Mar 9, 2021, 3:17 PM IST
ನವ ದೆಹಲಿ : ಸಿಂದಿಯಾ ಬಿಜೆಪಿಯಲ್ಲಿ ಮೂಲೆ ಗುಂಪಾಗಿದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜ್ಯೋತಿರಾದಿತ್ಯ ಸಿಂದಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಕಾಂಗ್ರೆಸ್ ನಲ್ಲಿರುವಾಗಲೇ ರಾಹುಲ್ ಗಾಂಧಿ ಇದೇ ರೀತಿ ಕಾಳಜಿ ವಹಿಸಿದ್ದರೇ ಪರಿಸ್ಥಿತಿ ಬೇರೆನೆ ಆಗುತ್ತಿತ್ತು ಎಂದು ಸಿಂದಿಯಾ ಪ್ರತಿಕ್ರಿಸಿದ್ದಾರೆ.
ಕಮಲ ನಾಥ್ ನೇತೃತ್ವದ ಸರ್ಕಾರವನ್ನು ಪತನಗೊಳಿಸಿ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕಳೆದ ವರ್ಷದ ಮಾರ್ಚ್ ನಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷವನ್ನು ಜ್ಯೋತಿರಾದಿತ್ಯ ಸಿಂದಿಯಾ ಪ್ರಮುಖ ಪಾತ್ರವಹಿಸಿದ್ದರು ಎಂಬ ಸುದ್ದಿಗಳು ಆಗ ಸುದ್ದಿಯಾಗಿತ್ತು.
ಓದಿ : ಮಂಗಳೂರು: ತೈಲಬೆಲೆ ಏರಿಕೆ ವಿರೋಧಿಸಿ ನೇಣುಹಗ್ಗ ಪ್ರದರ್ಶಿಸಿ ಪ್ರತಿಭಟನೆ!
ಸೋಮವಾರ(ಮಾ.8) ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಯುವ ವಿಭಾಗದೊಂದಿಗೆ ನಡೆಸಿದ ಸಭೆಯಲ್ಲಿ ಪಕ್ಷದ ಮಹತ್ವವನ್ನು ತಿಳಿಸುವಾಗ ತಮ್ಮ ಒಂದು ಕಾಲದ ಆಪ್ತರ(ಜ್ಯೋತಿರಾದಿತ್ಯ) ಬಗ್ಗೆ ಮಾತನಾಡಿದ್ದಾರೆ.
ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ, ಮುಖ್ಯಮಂತ್ರಿಯಾಗಬಹುದಿತ್ತು, ನಾನು ಕೂಡ ಖುದ್ದಾಗಿ ಹೇಳಿದ್ದೇನೆ. ಆದರೇ, ಅವರು ಬೇರೆ ಮಾರ್ಗವನ್ನು ಕಂಡುಕೊಂಡರು ಎಂದು ರಾಹುಲ್ ಗಾಂಧಿ ನಿನ್ನೆ(ಸೋಮವಾರ, ಮಾ.8) ಹೇಳಿದ್ದರು.
ಬರೆದಿಟ್ಟುಕೊಳ್ಳಿ, ಸಿಂದಿಯಾ ಬಿಜೆಪಿಯಿಂದ ಮುಖ್ಯಮಂತ್ರಿ ಎಂದಿಗೂ ಆಗುವುದಿಲ್ಲ. ಅದಕ್ಕಾಗಿ ಅವರು ಮರಳಿ ಇಲ್ಲಿಗೆ ಬರಬೇಕಾಗುತ್ತದೆ ಎಂದು ಸಹ ಗಾಂಧಿ ಹೇಳಿದ್ದರು.
ಓದಿ : ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ