ತಿವಾರಿಗೆ 15 ಇರಿತ!
Team Udayavani, Oct 23, 2019, 11:16 PM IST
ಲಕ್ನೋ: ಉತ್ತರಪ್ರದೇಶದ ಹಿಂದೂ ಸಮಾಜ್ ಪಕ್ಷದ ನಾಯಕ ಕಮಲೇಶ್ ತಿವಾರಿಯವರನ್ನು 15 ಬಾರಿ ಇರಿದು, ಅನಂತರ ಮುಖಕ್ಕೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು ಎಂದು ಅವರ ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ಅವರ ದೇಹದಲ್ಲಿ ಒಂದು ಗುಂಡಿನ ಗಾಯ ಮತ್ತು 15 ಇರಿತದ ಗಾಯಗಳು ಕಂಡುಬಂದಿವೆ. ಕಳೆದ ಶುಕ್ರವಾರ ಅವರ ನಿವಾಸಕ್ಕೆ ತೆರಳಿದ್ದ ಇಬ್ಬರು ದುಷ್ಕರ್ಮಿಗಳು ತಿವಾರಿಯವರನ್ನು ಕೊಲೆಗೈದಿದ್ದರು. ಇದೇ ವೇಳೆ, ತಿವಾರಿ ಅವರ ಪತ್ನಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು 15 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ.