ರಾಜಕೀಯ ಪ‹ವೇಶಿಸುತ್ತಾರಾ ಕಂಗನಾ?
Team Udayavani, Jul 30, 2018, 8:40 AM IST
ಹೊಸದಿಲ್ಲಿ: ಬಾಲಿವುಡ್ ನಟಿ ಕಂಗನಾ ರಣಾವುತ್ ರಾಜಕೀಯ ಪ್ರವೇಶಿಸುತ್ತಾರಾ? ಹೌದು, ರಾಜಕೀಯ ಪ್ರವೇಶಿಸಬೇಕೆಂದರೆ ಅದಕ್ಕೂ ನಾನು ಸಿದ್ಧ ಎಂದು ಸ್ವತಃ ಕಂಗನಾ ಅವರೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ ಅವರನ್ನೂ ಶ್ಲಾಘಿಸಿರುವ ಕಂಗನಾ, ‘ಅವರು ಪ್ರಜಾ ಪ್ರಭುತ್ವದ ಸಮರ್ಥ ನಾಯಕ’ ಎಂದಿದ್ದಾರೆ.
ಪ್ರಧಾನಿ ಮೋದಿ ಅವರ ಬಾಲ್ಯದ ಜೀವನವನ್ನು ಆಧರಿಸಿ ನಿರ್ಮಿಸಲಾಗಿರುವ ಚಲೋ ಜೀತೆ ಹೇಂ ಎಂಬ ಸಾಕ್ಷ್ಯಚಿತ್ರದ ಸ್ಕ್ರೀನಿಂಗ್ನಲ್ಲಿ ಭಾಗವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ. ಇದೇ ವೇಳೆ, ಮೋದಿ ಸರಕಾರದ 4 ವರ್ಷಗಳ ಸಾಧನೆ ಯನ್ನು ಪ್ರಶ್ನಿಸಿದಾಗ, ‘ಅವರು ಅತ್ಯಂತ ಪರಿಶ್ರಮದಿಂದ ಪ್ರಧಾನಿ ಹುದ್ದೆಗೇರಿದ್ದಾರೆ. ಅದಕ್ಕೆ ಅವರು ಅರ್ಹರೂ ಹೌದು. ಹೀಗಾಗಿ, ಪ್ರಧಾನ ಮಂತ್ರಿಯಾಗಿ ಅವರ ಸಾಮರ್ಥ್ಯದ ಕುರಿತು ಯಾವುದೇ ಅನು ಮಾನವಿಲ್ಲ’ ಎಂದಿದ್ದಾರೆ. ನೀವೂ ರಾಜಕೀಯ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಂಗನಾ, ‘ದೇಶವು ಅಪಾಯದಲ್ಲಿದ್ದಾಗ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಹೀಗಾಗಿ, ರಾಜಕೀಯ ಮಾತ್ರವಲ್ಲ, ನಮ್ಮ ದೇಶ ಯಾವಾಗ ನನ್ನನ್ನು ಬಯಸುತ್ತದೋ, ಅಂಥ ಸಮಯದಲ್ಲಿ ನಾನು ನನ್ನ ಪ್ರಾಣ ಕೊಡಲೂ ಸಿದ್ಧ’ ಎಂದಿದ್ದಾರೆ.
ಮೋದಿ ಬಗ್ಗೆ ಸಾಕ್ಷ್ಯಚಿತ್ರ
ಪ್ರಧಾನಿ ಮೋದಿ ಅವರ ಬಾಲ್ಯದ ಘಟನೆಗಳನ್ನು ಆಧರಿಸಿ ಮಂಗೇಶ್ ಹಡವಾಲೆ ಅವರು ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದಾರೆ. ಅದರ ಹೆಸರು ‘ಚಲೋ ಜೀತೆ ಹೇಂ’. ಮುಂಬೈನಲ್ಲಿ ಅದರ ವಿಶೇಷ ಪ್ರದರ್ಶನ ನಡೆದಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿಎಂ ಫಡ್ನವೀಸ್, ತಾರೆಯರಾದ ಕಂಗನಾ, ಅಕ್ಷಯ್ ಕುಮಾರ್, ಅಮಿಶಾ ಪಟೇಲ್, ಕ್ರಿಕೆಟ್ ದೇವರು ತೆಂಡೂಲ್ಕರ್ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
Congress ಪಡೆದ ಬಾಂಡ್ ಸುಲಿಗೆ ಅಲ್ಲವೇ: ಅಮಿತ್ ಶಾ ಪ್ರಶ್ನೆ
250 km per hour; ಶೀಘ್ರದಲ್ಲೇ ಬುಲೆಟ್ ರೈಲಿನಲ್ಲೂ ಆತ್ಮನಿರ್ಭರತೆ!
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?