ಸವಾರರ ರಕ್ಷಣೆಗೆ ರಸ್ತೆ ಮಧ್ಯೆ 7 ಗಂಟೆ ನಿಂತಿದ್ದ ಮಹಿಳೆಗೆ ದೇಣಿಗೆ
Team Udayavani, Aug 12, 2020, 6:00 AM IST
ಮುಂಬೈ: ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯದಲ್ಲಿದ್ದ ಮ್ಯಾನ್ಹೋಲ್ ಬಳಿ ಸತತ ಏಳು ಗಂಟೆ ಕಾಲ ನಿಂತು ಟ್ರಾಫಿಕ್ ಪೊಲೀಸರಂತೆ ಕಾರ್ಯ ನಿರ್ವಹಿಸಿದ ಮಹಿಳೆಗೆ 1.5 ಲಕ್ಷ ರೂ.ದೇಣಿಗೆ ನೀಡಲಾಗಿದೆ. ಮುಂಬೈನಲ್ಲಿ ಆ.4ರಂದು ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿ ಸಂಚಾರ ವ್ಯತ್ಯಯವಾಗಿತ್ತು. ಈ ಸಂದರ್ಭದಲ್ಲಿ ಬೀದಿಬದಿ ಹೂ ವ್ಯಾಪಾರಿ ಕಾಂತಾ ಮೂರ್ತಿ(50) ಎಂಬಾಕೆ ರಸ್ತೆ ಮಧ್ಯದಲ್ಲಿದ್ದ ಮ್ಯಾನ್ಹೋಲ್ ಮುಚ್ಚಳವನ್ನು ತೆರೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದರು. ಅಲ್ಲದೆ, ಮ್ಯಾನ್ಹೋಲ್ ಬಳಿ 7 ಗಂಟೆಗಳ ಕಾಲ ನಿಂತು, ತನ್ನತ್ತ ವಾಹನಗಳು ಬಾರದಂತೆ ನೋಡಿಕೊಂಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಮಳೆಯಿಂದಾಗಿ ಈಕೆಯ ಹೂವಿನ ಟೆಂಟ್ ಕೂಡ ಕೊಚ್ಚಿಹೋಗಿತ್ತು.
ಇದರಿಂದಾಗಿ 10 ಸಾವಿರ ರೂ. ನಷ್ಟವಾಗಿತ್ತು. ಈ ಮಹಿಳೆಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿಕೊಂಡು ಉದ್ಯಮಿಗಳು, ಸಾರ್ವಜನಿಕರು 1.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂತಾ ಮೂರ್ತಿ, “2017ರಲ್ಲಿ ಮಳೆಯಿಂದಾಗಿ ಮ್ಯಾನ್ಹೋಲ್ ತೆರೆದಿದ್ದಕ್ಕೆ ಓರ್ವ ಸವಾರ ಸಾವನ್ನಪ್ಪಿದ್ದನು. ಅಲ್ಲದೇ ಕಳೆದ ವಾರ ಸುರಿದ ಭಾರೀ ಮಳೆಯಿಂದ ರಸ್ತೆಗಳು ನೀರಿನಿಂದ ಕೂಡಿದ್ದವು. ಹೀಗಾಗಿ ಬೇರೆ ದಾರಿಯಿಲ್ಲದೇ ನಾನೇ ಖುದ್ದಾಗಿ ರಸ್ತೆಗೆ ತೆರಳಿ ಮ್ಯಾನ್ಹೋಲ್ ತೆರೆದು ನೀರು ಹರಿದು ಹೋಗುವಂತೆ ಮಾಡಿದ್ದೆ. ಅಲ್ಲದೇ ಸತತ 7 ಗಂಟೆ ಕಾಲ ನಿಂತು ಇತ್ತ ವಾಹನಗಳು ಬಾರದಂತೆ ಬಾರದಂತೆ ನೋಡಿಕೊಂಡಿದ್ದೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್