ಕಾರ್ಗಿಲ್ ಹೀರೋಗಳೇ ನಮ್ಮ ದೇಶಕ್ಕೆ ಮಾದರಿ:ಮೋದಿ
Team Udayavani, Jul 27, 2019, 8:45 PM IST
ನವದೆಹಲಿ: ಕಾರ್ಗಿಲ್ ಯುದ್ಧವು ಇಡೀ ದೇಶಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಕಾರ್ಗಿಲ್ ವಿಜಯ್ ದಿವಾಸ್ ಸಮಾರಂಭದಲ್ಲಿ ಮಾತನಾಡಿದ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಹಾಗೂ ಕಾರ್ಗಿಲ್ ಹೀರೋಗಳ ತಾಯಂದಿರು,ಕುಟುಂಬಗಳಿಗೆ ನನ್ನ ನಮನ .
ದೇಶದ ಪ್ರತಿಯೊಬ್ಬ ಪ್ರಜೆಯೂ ಸೇನೆಯನ್ನು ಗೌರವಿಸಬೇಕು,ಹುತಾತ್ಮ ಯೋಧರ ತ್ಯಾಗ,ಬಲಿದಾನವನ್ನು ಗೌರವಿಸಬೇಕು.ಕಾರ್ಗಿಲ್ ವಿಜಯ ಯುವಸಮೂಹಕ್ಕೆ ಸ್ಪೂರ್ತಿದಾಯಕ ಯೋಧರ ತ್ಯಾಗ ಮತ್ತು ಬಲಿದಾನ ಮರೆಯಲು ಸಾಧ್ಯವಿಲ್ಲ
ಕಾರ್ಗಿಲ್ ಯುದ್ಧವು ಇನ್ನೂ ಇಡೀ ದೇಶಕ್ಕೆ ಸ್ಫೂರ್ತಿ ನೀಡುತ್ತದೆ ಮತ್ತು ವಿಜಯವು ಭಾರತದ ಏಕತೆ, ಶಕ್ತಿ ಮತ್ತು ತಾಳ್ಮೆಯ ವಿಜಯವಾಗಿದೆ.