ಜುಲೈ 14ರಂದು ಕರ್ತಾರ್ಪುರ್ ಕಾರಿಡಾರ್ ಎರಡನೇ ಸುತ್ತಿನ ಮಾತುಕತೆ
Team Udayavani, Jul 3, 2019, 11:20 AM IST
ದಿಲ್ಲಿ/ಇಸ್ಲಾಮಾಬಾದ್ : ಕರ್ತಾರ್ಪುರ್ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತ – ಪಾಕಿಸ್ಥಾನದ ಅಧಿಕಾರಿಗಳು ಇದೇ ಜುಲೈ 14ರಂದು ಪಾಕಿಸ್ಥಾನದ ವಾಘಾ ಗಡಿಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಕರ್ತಾರ್ಪುರ್ ಕಾರಿಡಾರ್ ಸಭೆಯನ್ನು ಜು.11ರಿಂದ 14ರ ನಡುವಿನ ಯಾವುದೇ ದಿನಾಂಕಕ್ಕೆ ನಿಗದಿಸಬಹುದಾಗಿದೆ ಎಂದು ಕಳೆದ ವಾರ ಹೊಸದಿಲ್ಲಿ ಇಸ್ಲಾಮಾಬಾದ್ ಗೆ ತಿಳಿಸಿತ್ತು. ಆ ಪ್ರಕಾರ ಪಾಕಿಸ್ಥಾನ ಅದನ್ನು ಜುಲೈ 14ಕ್ಕೆ ನಿಗದಿಸಿದೆ.
ಈ ಎರಡನೇ ಸುತ್ತಿನ ಮಾತುಕತೆಯು ಈ ಮೊದಲು ಎ.2ರಂದೇ ನಡೆಯುವ ನಿರೀಕ್ಷೆ ಇತ್ತು. ಆದರೆ ಪಾಕಿಸ್ಥಾನವು ಖಾಲಿಸ್ಥಾನೀ ನಂಟು ಹೊಂದಿದವರನ್ನು ಕರ್ತಾರ್ಪುರ್ ಕಾರಿಡಾರ್ ಸಮಿತಿಗೆ ನೇಮಿಸಿದುದನ್ನು ಪ್ರತಿಭಟಿಸಿ ಭಾರತ ಎ.2ರ ಸಭೆಯನ್ನು ಮುಂದಕ್ಕೆ ಹಾಕಿತ್ತು.
ಕರ್ತಾರ್ಪುರ್ ಕಾರಿಡಾರ್ ಕುರಿತ ಮೊದಲ ಸುತ್ತಿನ ಸಭೆಯು ಕಳೆದ ಮಾರ್ಚ್ 14ರಂದು ಅಟ್ಟಾರಿ ವಾಘಾ ಗಡಿಯಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು