ಬೇಲ್ ಮೇಲೆ ಹೊರಬಂದ ಕರುಣಾಸ್; ಸ್ಟಾಲಿನ್ ಭೇಟಿ; ಸ್ಪಷ್ಟನೆ
Team Udayavani, Oct 12, 2018, 3:47 PM IST
ಚೆನ್ನೈ : ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮತ್ತು ಪೊಲೀಸರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ಬಂಧಿತರಾಗಿ ಇದೀಗ ಬೇಲ್ ನಲ್ಲಿ ಹೊರಬಂದಿರುವ ಪಕ್ಷೇತರ ಶಾಸಕ ಎಸ್ ಕರುಣಾಸ್ ಇಂದು ಶುಕ್ರವಾರ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರನ್ನು ಭೇಟಿಯಾದರು.
ಕಳೆದ ತಿಂಗಳಲ್ಲಿ ತಾನು ಬಿಜೆಪಿ ನಾಯಕ ಎಚ್ ರಾಜಾ ಮತ್ತು ಎಸ್ ವಿ ಶೇಖರ್ ಅವರೇಕೆ ಕೇಸುಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದ ಸಂದರ್ಭದಲ್ಲಿ ತಾನು ಅರೆಸ್ಟ್ ಆಗಿದ್ದಾಗ ತನ್ನನ್ನು ಬೆಂಬಲಿಸಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮಾತನಾಡಿದ್ದರು; ಆ ಕಾರಣಕ್ಕಾಗಿ ತಾನು ಬೇಲ್ ನಿಂದ ಹೊರಬಂದ ಮೊದಲಲ್ಲಿ ಸ್ಟಾಲಿನ್ ಅವರನ್ನೇ ಭೇಟಿಯಾದೆ ಎಂದು ಕರುಣಾಸ್ ಹೇಳಿದ್ದಾರೆ.
ಮಾಧ್ಯಮದ ಒಂದು ವರ್ಗ ಮತ್ತು ಕೆಲವರು ನನ್ನನ್ನು ಸ್ಟಾಲಿನ್ ಅಥವಾ ಎಎಂಎಂಕೆ ಸ್ಥಾಪಕ ಟಿಟಿವಿ ದಿನಕನ್ ನಿರ್ದೇಶಿಸುತ್ತಿದ್ದಾರೆ ಎಂದು ನಂಬುತ್ತಾರೆ; ಆದರೆ ಇದು ಸರಿಯಲ್ಲ ಎಂದು ಕರುಣಾಸ್ ಹೇಳಿದರು.