ಕಾಶ್ಮೀರ: ISIS ಕುತಂತ್ರ ಅನುಸರಿಸುತ್ತಿರುವ ಪಾಕ್; ಡ್ರೋನ್ ಮೂಲಕ ಬಾಂಬ್, ಶಸ್ತ್ರಾಸ್ತ್ರ
Team Udayavani, Oct 21, 2020, 5:58 AM IST
ಸಾಂದರ್ಭಿಕ ಚಿತ್ರ
ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಸದಾ ತಕರಾರು ತೆಗೆಯುತ್ತಲೇ ಇರುವ ನೆರೆಯ ಪಾಕಿಸ್ಥಾನವು ಈಗ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸುವ ತಂತ್ರ ಅನುಸರಿಸಲು ಮುಂದಾಗಿದೆ.
ಐಸಿಸ್ ಉಗ್ರ ಸಂಘಟನೆಯು ಇರಾಕ್ನಲ್ಲಿ ಸೇನೆಯ ಮೇಲೆ ದಾಳಿ ನಡೆಸಲು ಬಾಂಬ್ ಮತ್ತು ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಕಳುಹಿಸಿ ದಾಳಿ ಸಂಘಟಿಸುತ್ತಿತ್ತು. ಅದೇ ಮಾದರಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಸರಿಸಲು ಪಾಕ್ ಮುಂದಾಗಿದೆ. ಈ ನಿಟ್ಟಿನಲ್ಲಿ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐಯು ಉಗ್ರರಿಗೆ ತರಬೇತಿ ನೀಡಲಾರಂಭಿಸಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಚರ್ಚೆಯೂ ನಡೆದಿದೆ
ಐಎಸ್ಐಯು ಇಂಥ ಕುಕೃತ್ಯ ನಡೆಸಲು ಉಗ್ರ ಸಂಘಟನೆ ಲಷ್ಕರ್-ಎ-ತಯ್ಯ ಬಾ, ಜೈಶ್-ಎ-ಮೊಹಮ್ಮದ್ ಜತೆಗೆ ಸಭೆಯನ್ನೂ ನಡೆಸಿದೆ. ಪಂಜಾಬ್ ಪ್ರಾಂತ್ಯದಲ್ಲಿ ಎಪ್ರಿಲ್ನಲ್ಲಿ ಈ ಸಭೆ ನಡೆದಿತ್ತು. ಇದಾದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯಲ್ಲಿ ಮತ್ತೂಂದು ಸಭೆಯೂ ನಡೆದಿತ್ತು.
ನಾಲ್ವರು ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಮಂಗಳವಾರ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಉಗ್ರರನ್ನು ಕೊಲ್ಲಲಾಗಿದೆ. ಇದ ರೊಂದಿಗೆ ಎರಡು ದಿನಗಳ ಅವಧಿಯಲ್ಲಿ ಅಲ್ಲಿ ಒಟ್ಟು ಐವರು ಉಗ್ರರನ್ನು ಕೊಂದಂತಾಗಿದೆ.
ಉಗ್ರರ ಯೋಜನೆಯೇನು?
– 5 ಕೆಜಿವರೆಗಿನ ಸ್ಫೋಟಕ ಒಯ್ಯಬಲ್ಲ ಕ್ವಾಡೋ ಕಾಪ್ಟರ್ ಡ್ರೋನ್ಗಳ ಬಳಕೆ. ಇವುಗಳಿಗೆ ಮೂರು ಕಿ.ಮೀ. ದೂರ ಹಾರಾಡಬಲ್ಲ ಸಾಮರ್ಥ್ಯ ಇರುತ್ತದೆ.
– ಐಸಿಸ್ ಇಂಥ ಯೋಜನೆಯಲ್ಲಿ ಯಶ ಪಡೆದಿರುವುದರಿಂದ ಅಮೆರಿಕದ ಡ್ರೋನ್ ಉತ್ಪಾದಕರು ಇದಕ್ಕೆ ತಿರುಗೇಟು ನೀಡುವ ವ್ಯವಸ್ಥೆ ಕಂಡುಕೊಂಡಿದ್ದಾರೆ.
– ಐಸಿಸ್ನ ಯಶಸ್ಸಿನಿಂದ ಇತರ ಸಂಘಟನೆಗಳೂ ಇದರತ್ತ ಆಸಕ್ತಿ ವಹಿಸಿವೆ.
– ಪಾಕ್ ಈಗ ಇದೇ ಕಾರ್ಯತಂತ್ರ ಅನುಸರಿಸಲು ಮುಂದಾಗಿದೆ. ಎಲ್ಒಸಿಯಲ್ಲಿ ಬಿಎಸ್ಎಫ್ ಮತ್ತು ಸೇನೆ ಈ ಹಿಂದೆ ಹಲವು ಬಾರಿ ಪಾಕ್ ಸೇನೆಯು ಡ್ರೋನ್ ಮೂಲಕ ಕಳುಹಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು