9ನೇ ಆವೃತ್ತಿಯ ಮೊದಲ “ಕರೋಡ್ಪತಿ’ ಅನಾಮಿಕಾ
Team Udayavani, Oct 1, 2017, 7:50 AM IST
ಹೊಸದಿಲ್ಲಿ: ಜೆಮೆಡ್ಪುರದ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಎರಡು ಮಕ್ಕಳ ತಾಯಿ ಈಗ “ಕರೋಡ್ಪತಿ’!
ಹೌದು, ಬುದ್ಧಿಮತ್ತೆ ಪರೀಕ್ಷೆ ಹಾಗೂ ಸ್ಫೂರ್ತಿದಾಯಕ ಅನುಭವಗಳ ಮಾತುಕತೆಯ ಮೂಲಕ ಕಠಿಣ ಪ್ರಶ್ನೆಗಳಿಗೆ ಉತ್ತರಿಸುವ ಚಾಣಾಕ್ಷತನದ ಕಾರ್ಯಕ್ರಮ, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಿರೂಪಣೆಯ “ಕೌನ್ ಬನೇಗಾ ಕರೋಡ್ಪತಿ’ 9ನೇ ಆವೃತ್ತಿಯ ಮೊದಲ ಸುತ್ತಿನ ಶೂಟಿಂಗ್ ಶುಕ್ರವಾರ ನಡೆದಿದೆ. ಜೆಮೆÒಡ್ಪುರದ ಸಾಮಾಜಿಕ ಕಾರ್ಯಕರ್ತೆ ಅನಾಮಿಕಾ ಮುಜುಮಾªರ್, 1 ಕೋಟಿ ರೂ. ಗೆದ್ದು ಆಟ ನಿಲ್ಲಿಸಿದ್ದಾರೆ. ಆಕೆಯ ಆತ್ಮವಿಶ್ವಾಸಕ್ಕೆ ಸ್ವತಃ ಬಿಗ್ಬಿ ಶಹಬ್ಟಾಸ್ ಎಂದಿದ್ದಾರೆ.
ಅನಾಮಿಕಾ ಈ ಆವೃತ್ತಿಯ ಮೊದಲ “ಕರೋಡ್ಪತಿ’. ಮುಂಬೈನ ಫಿಲಂಸಿಟಿಯಲ್ಲಿರುವ ಕೌನ್ ಬನೇಗಾ ಕರೋಡ್ಪತಿ ಸೆಟ್ನಲ್ಲಿ ಶೂಟಿಂಗ್ ನಡೆದಿದ್ದು, ಕಾರ್ಯಕ್ರಮ ಮುಂದಿನ ತಿಂಗಳು ಪ್ರಸಾರಗೊಳ್ಳಲಿದೆ.
“”ಅನಾಮಿಕಾ ಕೇಳಿದ ಪ್ರಶ್ನೆಗಳಿಗೆಲ್ಲ ಕ್ರಿಯಾಶೀಲರಾಗಿ ಹಾಗೂ ಸಮಂಜಸವಾದ ಉತ್ತರ ನೀಡಿದ್ದಾರೆ. ಯಾವ ಪ್ರಶ್ನೆಗೂ ಲೈಫ್ಲೈನ್ ಪಡೆದು ಕೊಳ್ಳದೇ ಗುರಿ ಸಾಧಿಸಿದ್ದಾರೆ. ಅವರಲ್ಲಿರುವ ಆತ್ಮ ವಿಶ್ವಾಸ ಕಂಡು ಸ್ವತಃ ಅಮಿತಾಭ್ ಬಚ್ಚನ್ ಅವರೇ ಅಚ್ಚರಿ ವ್ಯಕ್ತಪಡಿಸಿ ಪ್ರಶಂಸಿಸಿದರು” ಎಂದು ಆಪ್ತ ಮೂಲಗಳು ತಿಳಿಸಿದ್ದಾಗಿ ವರದಿ ಮಾಡಲಾಗಿದೆ.
ಅನಾಮಿಕಾ ಸಂಗೀತ ಪ್ರಿಯೆಯಾಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಅವರು ಫೇತ್ ಇನ್ ಇಂಡಿಯಾ ಎನ್ಜಿಒದಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಕುಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸುವ, ಮಾಹಿತಿ ಸಂಗ್ರಹಿಸಿ ವರದಿ ಒಪ್ಪಿಸುವ ವೃತ್ತಿ ಅವರದ್ದಾಗಿದೆ. ಮೂರು ವರ್ಷಗಳಿಂದ ಈ ಸೇವೆಯಲ್ಲಿದ್ದಾರೆ.
ಕ್ವಿಟ್ ಆಗಿದ್ದೇಕೆ?
ಅಷ್ಟಕ್ಕೂ ಅನಾಮಿಕಾ ಅವರಿಗೆ 7 ಕೋಟಿ ರೂ. ಗೆಲ್ಲುವ ಅವಕಾಶವೂ ಇತ್ತು. ಒಂದು ಕೋಟಿ ರೂ. ಗೆಲ್ಲುತ್ತಿದ್ದಂತೆ ಮುಂದಿನ ಆಟದ ವೈಖರಿಯ ಬಗ್ಗೆ ಬಿಗ್ಬಿ ವಿವರಿಸಿ, ಗೆಲ್ಲುವ ವಿಶ್ವಾಸವಿದೆಯೇ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ತಕ್ಷಣ
ಪ್ರತಿಕ್ರಿಯಿಸಿದ ಅನಾಮಿಕಾ ಸ್ಪರ್ಧೆ ಮುಂದುವರಿಸುವುದಾಗಿ ಹೇಳಿ, ಮತ್ತೆ ಕಠಿಣವಾದೀತು ಎಂದು ಭಾವಿಸಿ ಸ್ಪರ್ಧೆಯಿಂದ ಹಿಂದೆ ಸರಿದರು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ