ಕೆಸಿ ಚಂದ್ರಶೇಖರ್ ರಂಗಕ್ಕೆ ಹಿನ್ನಡೆ
ಒಮ್ಮೆ ಭೇಟಿಗೆ ಸಮ್ಮತಿಸಿ ಬಳಿಕ ಒಲ್ಲೆ ಎಂದ ಸ್ಟಾಲಿನ್
Team Udayavani, May 8, 2019, 6:15 AM IST
ಹೈದರಾಬಾದ್: ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗವೊಂದನ್ನು ಕಟ್ಟುವ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ್ ಅವರ ಪ್ರಯತ್ನಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ.
ಸೋಮವಾರವಷ್ಟೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದ ಕೆಸಿಆರ್, ಪ್ರತ್ಯೇಕ ರಂಗದ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೆ ಮೇ 13ರಂದು ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಯಾಗುವು ದಾಗಿ ಹೇಳಿದ್ದರು. ಆದರೆ ಸದ್ಯಕ್ಕೆ ಕೆಸಿಆರ್ ಅವರನ್ನು ಭೇಟಿ ಯಾಗಲು ಕಾಲಾವಕಾಶ ಇಲ್ಲ, ಪ್ರಚಾರದ ಒತ್ತಡ ದಲ್ಲಿದ್ದೇನೆ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಮೂಲಕ ಮೊದಲು ಭೇಟಿ ಯಾಗುವುದಾಗಿ ಹೇಳಿ, ಈಗ ಯೂಟರ್ನ್ ಹೊಡೆದಿದ್ದಾರೆ.
ಈಗಾಗಲೇ ದೇಶದಲ್ಲಿ ಮಹಾಘಟಬಂಧನ್ ಇದ್ದು, ಇದರಲ್ಲಿ ಕಾಂಗ್ರೆಸ್ ಕೂಡ ಪಾಲುದಾರನಾಗಿದೆ. ಆದರೆ ಕೆಸಿಆರ್ ಅವರಿಗೆ ಕಾಂಗ್ರೆಸ್ ಜತೆಗೆ ಹೋಗಲು ಇಷ್ಟವಿಲ್ಲ. ಹೀಗಾಗಿ ಅವರು ದಕ್ಷಿಣ ಭಾರತ ದಲ್ಲೇ ಪ್ರಬಲ ರಂಗವೊಂದನ್ನು ಕಟ್ಟುವ ಆಲೋಚನೆ ಯಲ್ಲಿದ್ದಾರೆ. ಹೀಗಾಗಿಯೇ ಸ್ಟಾಲಿನ್ ಬಳಿಕ ಕರ್ನಾಟಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಭೇಟಿಯಾಗಲಿದ್ದಾರೆ.
ಸ್ಟಾಲಿನ್ ಹಿಂದೆಗೆತ ಏಕೆ?
ಸದ್ಯ ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಜತೆ ಹೊಂದಾ ಣಿಕೆ ಮಾಡಿಕೊಂಡಿದೆ. ಈಗಾಗಲೇ ಹಲವಾರು ಬಾರಿ ಸ್ಟಾಲಿನ್ ಅವರು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಕಾಂಗ್ರೆಸ್ನಿಂದ ಬೇರೆಯಾಗುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಈಗ ಕೆಸಿಆರ್ ಅವರನ್ನು ಭೇಟಿಯಾದರೆ, ಮಹಾಘಟಬಂಧನ್ನಲ್ಲಿ ಒಡಕುಂಟಾಗ ಬಹುದು ಎಂಬ ಕಾರಣಕ್ಕೆ ಯೂಟರ್ನ್ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ