ರೈಲಿನಿಂದ ಬಿದ್ದು 80ರ ಹರೆಯದ ಕೇರಳ ಬಿಷಪ್ ದಾರುಣ ಸಾವು
Team Udayavani, Aug 24, 2018, 12:08 PM IST
ಕೊಚ್ಚಿ : 80ರ ಹರೆಯದ ಕೇರಳ ಬಿಷಪ್ ಥಾಮಸ್ ಮಾರ್ ಎಥನಾಸಿಯೋಸ್ ಅವರು ಇಂದು ಶುಕ್ರವಾರ ಬೆಳಗ್ಗೆ 5.45ರ ವೇಳೆಗೆ ಚಲಿಸುತ್ತಿದ್ದ ರೈಲಿನಿಂದ ಕೆಳ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಥಾಮಸ್ ಮಾರ್ ಅವರು ಮಲಾಂಕರ ಅರ್ಥಡಕ್ಸ್ ಸಿರಿಯನ್ ಚರ್ಚಿನ ಶೆಂಗನ್ನೂರು ಡಯೋಸಿಸ್ ಮುಖ್ಯಸ್ಥರು. ಇವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪುಳೆಪೇಡಿ ಎಂಬಲ್ಲಿ ರೈಲಿನ ಬಾಗಿಲ ಬಳಿ ನಿಂತಿದ್ದರು. ಆಗ ಒಡನೆಯೇ ಬಾಗಿಲು ಬಲವಾಗಿ ಮುಚ್ಚಿಕೊಂಡಿತು. ಪರಿಣಾಮವಾಗಿ ಥಾಮಸ್ ಮಾರ್ ಅವರು ರೈಲಿನಿಂದ ಹೊರ ಬಿದ್ದು ಮೃತಪಟ್ಟರು ಎಂದು ವರದಿ ತಿಳಿಸಿದೆ.
ಬಿಷಪ್ ಥಾಮಸ್ ಅವರು ಕೋಟ್ಟಯಂ ಚರ್ಚ್ ವ್ಯಾಪ್ತಿಯ ಶೆಂಗನ್ನೂರು ಡಯೋಸಿಸ್ ಮುಖ್ಯಸ್ಥರಾಗಿದ್ದರೂ ದೂರದ ಗುಜರಾತ್ನಲ್ಲಿನ ಕೆಲವು ಶಿಕ್ಷಣ ಸಂಸ್ಥೆಗಳನ್ನು ಅವರು ನಡೆಸುತ್ತಿದ್ದರು. ಹಾಗಾಗಿ ಇವರು ಗುಜರಾತ್ ಮತ್ತು ಶೆಂಗನ್ನೂರ್ ನಡುವೆ ಆಗೀಗ ಎಂಬಂತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಕಳೆದ ಮೇ 29ರಿಂದ ಕೇರಳದ ಆದ್ಯಂತ ಸುರಿದ ಜಡಮಳೆಯಿಂದಾಗಿ ಸರಣಿ ದುರಂತಗಳು ಸಂಭವಿಸಿದ ಸುದ್ದಿ ತಿಳಿದ ಬಿಷಪ್ ಥಾಮಸ್ ಅವರು ತಮ್ಮ ಪ್ರಧಾನ ಕಾರ್ಯಾಲಯಕ್ಕೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
MUST WATCH
ಹೊಸ ಸೇರ್ಪಡೆ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ