ಮತ್ತೆ ‘ಅ’ದಿಂದಲೇ ಆರಂಭವಾಗಬೇಕಿದೆ ಬದುಕು


Team Udayavani, Aug 27, 2018, 9:26 AM IST

pottam1.jpg

ಕೊಚ್ಚಿ: “ಜೀವನದ 70 ವರ್ಷಗಳನ್ನು ಒಂದು ಮನೆ ಕಟ್ಟಲು ಹಾಗೂ ಮೂರು ಹೊತ್ತಿನ ಊಟ ಸಂಪಾದಿಸಲು ವ್ಯಯಿಸಿದ್ದೇನೆ. ಹುಟ್ಟುತ್ತಲೇ ಬುದ್ಧಿಮಾಂದ್ಯಳಾದ ಮಗಳನ್ನು ಸಾಕುವ ಸವಾಲಿನ ಹಾದಿಯಲ್ಲಿ ಪತಿಯನ್ನು ಕಳೆದುಕೊಂಡೆ. ಈಗ ನನಗೆ 97 ವರ್ಷ. ಇಷ್ಟು ವರ್ಷ ಕಷ್ಟಪಟ್ಟು ಕಟ್ಟಿದ್ದೆಲ್ಲವೂ ಈಗ ಮುರಿದು ಬಿದ್ದಿದೆ. ಈಗ ಮತ್ತೆ ಶುರುವಿಂದಲೇ ಆರಂಭಿಸಬೇಕಾಗಿದೆ.  

ಕೊಚ್ಚಿಯ ಆಂಡಿಪಿಲ್ಲಿಕಾವು ನಿರಾಶ್ರಿತರ ಕೇಂದ್ರದಲ್ಲಿರುವ ಚೆಟ್ಟೇರಿಯ ಸುಮತಿ ಹೇಳಿದ್ದಿದು. ಮದುವೆಯಾದ ಬಳಿಕ ಸಂಬಂಧಿಕರಿಂದ ದೂರವಾಗಿ ಗಂಡನೊಂದಿಗೆ ಬಡತನದಲ್ಲೇ ಬದುಕು ತೂಗಿಸುತ್ತಿದ್ದೆ. ಕೆಲವೇ ವರ್ಷಗಳಲ್ಲಿ ಪತಿ ಇಲ್ಲವಾದರು. ಜತೆಗಿದ್ದದ್ದು ಇಬ್ಬರು ಹೆಣ್ಣುಮಕ್ಕಳು. ಹಣ ಇಲ್ಲ ಎನ್ನುವ ಕಾರಣಕ್ಕೆ ಬುದ್ಧಿಮಾಂದ್ಯ ಮಗಳಿಗೆ ಚಿಕಿತ್ಸೆ, ಮದುವೆ ಯಾವುದೂ ಮಾಡಿಲ್ಲ. ಕೂಡಿಟ್ಟ ಹಣ ಹಾಗೂ ದಾನಿಗಳ ನೆರವಿನಿಂದ ಕಟ್ಟಿದ ಪುಟ್ಟ ಮನೆಯೂ ಇಂದು ಇಲ್ಲವಾಗಿದೆ ಎಂದು ಕಣ್ಣೀರಾದರು ಆಕೆ. ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದ ಇವರೀಗ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.  ಮತ್ತೆ ಶೂನ್ಯದಿಂದ ಬದುಕು ಆರಂಭಿಸಬೇಕಾದ ಸ್ಥಿತಿ ಈ ಹಿರಿಜೀವವನ್ನು ತತ್ತರಗೊಳಿಸಿದೆ.

ರಿಟ್ರೇಟ್‌ ಸೆಂಟರ್‌ಗೆ ಹಾನಿ

ಇತಿಹಾಸ ಪ್ರಸಿದ್ಧ ಕ್ರೈಸ್ತರ ಪ್ರಾರ್ಥನಾ ಮಂದಿರ ಪೊಟ್ಟಂ ಡಿವೈನ್‌ ರಿಟ್ರೇಟ್‌ ಸೆಂಟರ್‌ಗೆ ಹಾನಿಯಾಗಿದೆ. ಸೆಂಟರ್‌ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದ ಮುದ್ರಣಾಲಯ ಹಾಗೂ ದಾಸ್ತಾನು ಕೇಂದ್ರದಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಕ್ರೈಸ್ತರ ಧಾರ್ಮಿಕ ಗ್ರಂಥಗಳು ಸಂಪೂರ್ಣ ಹಾಳಾಗಿವೆ. ಇದನ್ನು ತೆರವುಗೊಳಿಸುವ ಕಾರ್ಯದಲ್ಲಿ ಯೋಧರು ಹಾಗೂ ಪೊಲೀಸರು ತೊಡಗಿದ್ದಾರೆ. ಸಂಸ್ಥೆಯ ಡೈರಿ ಫಾರಂನಲ್ಲಿದ್ದ ನೂರಾರು ಜಾನುವಾರುಗಳು ನೆರೆಗೆ ಬಲಿಯಾಗಿದ್ದವು.

ಟೋಲ್‌ಗ‌ಳೆಲ್ಲ ಬಂದ್‌
ಕೇರಳದ ಹೆದ್ದಾರಿಗಳಲ್ಲಿ ಸದ್ಯ ಟೋಲ್‌ ಸಂಗ್ರಹ ಸ್ಥಗಿತ ಮಾಡಲಾಗಿದೆ. ಇತರ ರಾಜ್ಯಗಳಿಂದ ಅಥವಾ ರಾಜ್ಯದ ಇತರೆಡೆಗಳಿಂದ ನೆರೆ ಪೀಡಿತ ಭಾಗಗಳಿಗೆ ಸಹಾಯ ಮಾಡಲು ಬರುವ ಜನರಿಗೆ ಹೊರೆ ಆಗಬಾರದು ಎಂಬ ನೆಲೆಯಲ್ಲಿ ಟೋಲ್‌ ಸಂಗ್ರಹಕ್ಕೆ ಸುಂಕ ಸಂಗ್ರಹ ಮಾಡುತ್ತಿಲ್ಲ.  

ಮತ್ತೆ ಬದುಕು ಕಟ್ಟಿಕೊಳ್ಳುವ ಶ್ರಮ
ನೆರೆ ಪೀಡಿತ ಪ್ರದೇಶದ ಜನರು ವಾರಗಳ ಬಳಿಕ ರೂಢಿಯ ಜೀವನ, ವ್ಯಾಪಾರ ವಹಿವಾಟಿನತ್ತ ಮುಖ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಮನೆ ಸಾಮಗ್ರಿ, ಪೀಠೊಪಕರಣಗಳು, ಬಟ್ಟಬರೆ, ಪುಸ್ತಕ, ದಾಖಲೆ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬಿಸಿಲಿಗೆ ಹಾಕಿ ತೇವ ಆರಿಸುವ ದೃಶ್ಯ ಎಲ್ಲೆಲ್ಲೂ ಕಾಣುತ್ತಿವೆ.

ಸೈನಿಕರಿಂದ ಕೇರಳದ ಪುನರುತ್ಥಾನ
ಎರ್ನಾಕುಲಂ: ನೆರೆಯಿಂದ ತತ್ತರಿಸಿದ ಕೇರಳ ಮತ್ತೆ ಎದ್ದು ನಿಲ್ಲಲು ಹವಣಿಸುತ್ತಿದೆ. ವಾರಗಳ ಬಳಿಕ ಸಂಘ ಸಂಸ್ಥೆಗಳ ನೆರವಿನಿಂದ ಮನೆ ಶುಚಿ, ಇತರ ಕಾರ್ಯಗಳು ಆರಂಭಗೊಂಡಿವೆ. ಇದಕ್ಕೆ ಯೋಧರೂ ಬೆನ್ನೆಲುಬಾಗಿದ್ದಾರೆ. ಮನೆ ಕಳೆದುಕೊಂಡ ಹಾಗೂ ಮನೆಗೆ ಹಾನಿ ಸಂಭವಿಸಿದ ಜನರಿಗೆ ಮೂಲಸೌಲಭ್ಯ ಸಿಗುವ ವರೆಗೆ ಪರಿಹಾರ ಕೇಂದ್ರದಲ್ಲೇ ವಾಸ್ತವ್ಯ ಕಲ್ಪಿಸುವ ಭರವಸೆಯನ್ನು ಕೇರಳ ಸರಕಾರ ನೀಡಿದೆ. ಮನೆ ತುಂಬೆಲ್ಲ ಆವರಿಸಿರುವ ಕೆಸರು ಶುಚಿ ಮಾಡಿ ಸಹಜ ಸ್ಥಿತಿಯತ್ತ ಬರುವ ವರೆಗೆ ನೆರವಿಗೆ ಸ್ಥಳೀಯ ಆಡಳಿತ ಸಂಸ್ಥೆ ಪಣ ತೊಟ್ಟಿದೆ.

ತತ್ತರಿಸಿದ ನೆರೆಗೆ  ಕೊಡೆ ಹಿಡಿದ ಜಿಎಸ್‌ಬಿ
ಅಲುವಾ: ಮಹಾಮಳೆಗೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಬೇರೆ ಬೇರೆ ಭಾಗಗಳಿಂದ ಸಂಘ ಸಂಸ್ಥೆಗಳು ವಿವಿಧ ರೀತಿಯಲ್ಲಿ ಕೇರಳಕ್ಕೆ ಸ್ಪಂದಿಸಿವೆ. ಈ ಪೈಕಿ ಸೇವಾ ಭಾರತಿಯ ಶ್ರಮ ಉಲ್ಲೇಖನೀಯ.ಅಲುವಾ ಪ್ರದೇಶದ ಜಿಎಸ್‌ಬಿ ಕೇಂದ್ರದಲ್ಲಿ ಆ. 16ರಂದು ಸುಮಾರು 260 ಮಂದಿಗೆ ನೆರವು ನೀಡಲಾಗಿತ್ತು. ನೆರೆ ನೀರು ಜಿಎಸ್‌ಬಿ ಕೇಂದ್ರದ ಒಳಭಾಗಕ್ಕೆ ಮುನ್ನುಗ್ಗುವಾಗಲೂ ಕಾರ್ಯಕರ್ತರು ನಿರಾಶ್ರಿತರ ರಕ್ಷಣೆಗೆ ಬದ್ಧರಾಗಿದ್ದರು. ಜಾತಿಧರ್ಮ ನೋಡದೆ ಸೇವಾ ಭಾರತಿ ಹಾಗೂ ಜಿಎಸ್‌ಬಿ ಸಮುದಾಯ ನಿರಾಶ್ರಿತರಿಗೆ ಸಹಾಯ ಮಾಡಿದೆ ಎಂದು “ಸೇವಾಭಾರತಿ’ಯ ದಿವಾಕರ್‌ ಶೆಣೈ ಹೇಳುತ್ತಾರೆ.

ನೆರೆಗೆ ಮುಳುಗಿದ ಬಳಿಕ ಈಗ ಮೈದಾನವೇ ಆಸ್ಪತ್ರೆ!
ಕೊಚ್ಚಿಯ ಚಾಲಕ್ಕುಡಿ ಸರಕಾರಿ ಆಸ್ಪತ್ರೆಗೆ ನೆರೆ ನೀರು ನುಗ್ಗಿ ಅವಾಂತರ ಆಗಿತ್ತು. ಈಗ ನೆರೆ ನೀರು ಕಡಿಮೆಯಾಗಿದೆ. ಆದರೆ ಆಸ್ಪತ್ರೆಯ ವೈದ್ಯಕೀಯ ಉಪಕರಣ, ವಸ್ತು, ಔಷಧಗಳು ನೆರೆ ನೀರಿನಲ್ಲಿ ತೋಯ್ದಿವೆ. ರವಿವಾರ ಆಸ್ಪತ್ರೆಯ ಮುಂಭಾಗದಲ್ಲಿರುವ ಮೈದಾನದಲ್ಲಿ ಆಸ್ಪತ್ರೆ ಪೀಠೊಪಕರಣ, ದಾಖಲೆಗಳು, ಉಪಕರಣಗಳು, ಔಷಧಗಳನ್ನು ಹರವಿ ಒಣಗಿಸುವ ಪ್ರಯತ್ನ ಮಾಡಲಾಯಿತು.  ಹೀಗಾಗಿ ಮೈದಾನವೇ ಆಸ್ಪತ್ರೆಯಂತೆ ಭಾಸವಾಗುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳು, ಔಷಧಗಳ ರಾಶಿ ಮೈದಾನದಲ್ಲಿದೆ. ಆಸ್ಪತ್ರೆ ಕಟ್ಟಡದ ಒಳಭಾಗದಲ್ಲಿ ಇನ್ನೂ ನೀರು ಇದೆ. ಪೊಲೀಸ್‌ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಒಣಗಿಸುವ ಕೆಲಸಕ್ಕೆ ಕೈಜೋಡಿಸಿದ್ದಾರೆ. ಸದ್ಯ ಈ ಸರಕಾರಿ ಆಸ್ಪತ್ರೆ ಜನ ಬಳಕೆಗೆ ಲಭ್ಯವಿಲ್ಲ.

ನೋಡುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ನೀರು ತುಂಬ ತೊಡಗಿತು. ಅಲ್ಲಿ ಗರ್ಭಿಣಿಯರು ಸೇರಿದಂತೆ 140 ಮಂದಿ ರೋಗಿಗಳಿದ್ದರು. ಬಳಿಕ ಎಲ್ಲರೊಂದಿಗೆ ಆಸ್ಪತ್ರೆಯ ಮೇಲ್ಛಾವಣಿಗೆ ತೆರಳಿದೆವು. ಯೋಧರು ಬಂದು ದೋಣಿಗಳಲ್ಲಿ ಎಲ್ಲರನ್ನೂ ಬೇರೆಡೆಗೆ ರವಾನಿಸಿದರು.
ಸಿಜೋಯ್‌, ಆಸ್ಪತ್ರೆ ಸಿಬಂದಿ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.