ಕೇರಳ: 45,000 ಹೆಕ್ಟೇರ್ನಲ್ಲಿನ ಬೆಳೆ ನಾಶ
Team Udayavani, Aug 28, 2018, 6:00 AM IST
ನವದೆಹಲಿ: ಕೇರಳದ ಜಲ ಪ್ರವಾಹದಿಂದಾಗಿ ಅಲ್ಲಿನ 45,000 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆಗಳು ಸಂಪೂರ್ಣ ನಾಶವಾಗಿದೆ ಎಂದು ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಶೋಭನಾ ಕೆ. ಪಟ್ನಾಯಕ್ ತಿಳಿಸಿದ್ದಾರೆ. 20,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ ಬಾಳೆ ಹಣ್ಣು ಕೃಷಿ ಹಾಳಾಗಿದ್ದರೆ, 2,000 ಹೆಕ್ಟೇರ್ಗಳಲ್ಲಿದ್ದ ಮಸಾಲೆ ಪದಾರ್ಥಗಳ ಬೆಳೆಗಳು ನಾಶವಾಗಿವೆ ಎಂದು ಅವರು ವಿವರಿಸಿದ್ದಾರೆ. ಇನ್ನು, ಕೇಂದ್ರ ಗೃಹ ಇಲಾಖೆ, ಮಳೆಯಿಂದಾಗಿ ದೇಶಾದ್ಯಂತ ಈ ವರ್ಷ 1,276 ಜನರು ಸಾವಿಗೀಡಾಗಿದ್ದು, ಕೇರಳದಲ್ಲಿ 443 ಜನರು ಮರಣ ಹೊಂದಿದ್ದಾರೆಂದು ಹೇಳಿದೆ. ಏತನ್ಮಧ್ಯೆ, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ರಶೀದ್ ಅಲ್ ಮಖೂ¤ಮ್ ಭಾನುವಾರ ಮಾಡಿರುವ ಟ್ವೀಟ್ಗಳು, ಅವರ ಸರ್ಕಾರ ಕೇರಳಕ್ಕೆ ನೀಡಬೇಕೆಂದಿದ್ದ 700 ಕೋಟಿ ರೂ. ನೆರವನ್ನು ಭಾರತ ತಿರಸ್ಕರಿಸಿದ್ದಕ್ಕೆ ಸಂಬಂಧಿಸಿದವು ಎಂಬ ಗುಮಾನಿ ಹುಟ್ಟು ಹಾಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ