ಸಂದೀಪ್ ಬ್ಯಾಗ್ನಲ್ಲಿ ಹ್ಯಾಂಡ್ಲರ್ಗಳ ಸುಳಿವು?
ದೇಶವಿರೋಧಿ ಕೃತ್ಯಗಳಿಗಾಗಿಯೇ ಚಿನ್ನ ಕಳ್ಳಸಾಗಣೆ
Team Udayavani, Jul 16, 2020, 8:07 AM IST
ತಿರುವನಂತಪುರ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ರನ್ನು ಬಂಧಿಸಿದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯು ಅವರ ಹ್ಯಾಂಡ್ಲರ್ಗಳ ಕುರಿತು ವಿವರ ಸಂಗ್ರಹಿಸುವ ಕೆಲಸ ಆರಂಭಿಸಿದೆ.
ಬಂಧನದ ವೇಳೆ ಸಂದೀಪ್ನಿಂದ ವಶಪಡಿಸಿಕೊಂಡಿದ್ದ ಬ್ಯಾಗ್ ಮತ್ತು ಮೊಬೈಲ್ ಫೋನ್ ಅನ್ನು ಪರಿಶೀಲಿಸಿದರೆ, ಹ್ಯಾಂಡ್ಲರ್ಗಳ ಕುರಿತು ಮಾಹಿತಿ ಸಿಗಬಹುದು ಎನ್ನುವುದು ಎನ್ಐಎ ಅಭಿಪ್ರಾಯವಾಗಿದೆ. ಅವರ ಬ್ಯಾಗ್ನಲ್ಲಿನ ಸಾಕ್ಷ್ಯವೊಂದು ಈ ಪ್ರಕರಣಕ್ಕೂ ದೇಶವಿರೋಧಿ ಶಕ್ತಿಗಳಿಗೂ ನಂಟಿರುವ ಸುಳಿವು ನೀಡಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಆ ಬ್ಯಾಗ್ನಲ್ಲಿ ಮೊಹಸಿರ್ ಎಂದು ಬರೆದಿದ್ದು, ಅದರಲ್ಲಿ ಒಂದು ಸೀಲ್ ಕೂಡ ಇದೆ. ಈಗಾಗಲೇ ಅಧಿಕಾರಿಗಳು ಎನ್ಐಎ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಬ್ಯಾಗ್ ತೆರೆಯಲು ಅವಕಾಶ ನೀಡುವಂತೆ ಕೋರಿದ್ದಾರೆ.
ಚಿನ್ನ ಕಳ್ಳಸಾಗಣೆಗೆ ಆರೋಪಿಗಳು ಯುಎಇಯ ನಕಲಿ ಸ್ಟಾಂಪ್ ಮತ್ತು ಚಿಹ್ನೆಗಳನ್ನು ಬಳಸು ತ್ತಿದ್ದರು. ಅವರು ಕಳ್ಳ ಸಾಗಣೆ ಮಾಡುತ್ತಿದ್ದ ಚಿನ್ನವನ್ನು ಆಭರಣ ಮಾಡಲು ಬಳಸುತ್ತಿ ರಲಿಲ್ಲ. ಬದಲಾಗಿ ದೇಶ ವಿರೋಧಿ ಕೃತ್ಯಕ್ಕೆ ಬಳಸುತ್ತಿದ್ದರು ಎಂದು ಮೂಲಗಳು ಹೇಳಿವೆ. ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಮೇಲೆ ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ದಾಳಿ ನಡೆಸಿದೆ. ಇದೇ ಫ್ಲ್ಯಾಟ್ನಲ್ಲಿ ಆರೋಪಿಗಳು ಕಳ್ಳ ಸಾಗಣೆಯ ಸಂಚು ರೂಪಿಸಿದ್ದರು.
ಆರೋಪಿಗಳ ಜತೆಗೆ ಸಂಪರ್ಕ ಒಪ್ಪಿದ ಐಎಎಸ್ ಅಧಿಕಾರಿ
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಮುಂಜಾನೆವರೆಗೂ ಅಂದರೆ ಸತತ 9 ಗಂಟೆಗಳ ಕಾಲ ಮ್ಯಾರಥಾನ್ ವಿಚಾರಣೆ ನಡೆಸಿದ್ದಾರೆ. ಮಂಗಳವಾರ ಸಂಜೆ 5.15ಕ್ಕೆ ಶಿವಶಂಕರ್ ಅವರು ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಚಿನ್ನ ಕಳ್ಳಸಾಗಣೆ ಆರೋಪಿಗಳಾದ ಸರಿತ್, ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ಗೆ ಸಹಾಯ ಮಾಡಲು ಶಿವಶಂಕರ್ ತಮ್ಮ ಕಚೇರಿಯನ್ನು ಬಳಸಿಕೊಂಡಿದ್ದರೇ ಎಂಬ ಕುರಿತು ವಿಚಾರಣೆ ನಡೆಸಲಾಗಿದೆ. ಈ ವೇಳೆ, ಅವರು ಆರೋಪಿಗಳೊಂದಿಗೆ ತಮಗಿದ್ದ ಸ್ನೇಹದ ಬಗ್ಗೆ ಬಾಯಿಬಿಟ್ಟಿದ್ದಾರೆ. ಶಿವಶಂಕರ್ ಅವರು ಆರೋಪಿಗಳಿಗೆ ಮಾಡಿದ್ದ ಹಲವು ಫೋನ್ ಕರೆಗಳ ಮಾಹಿತಿಯನ್ನೂ ತನಿಖಾಧಿಕಾರಿಗಳು ಪಡೆದಿದ್ದಾರೆ. ಇದೇ ವೇಳೆ, ಕಸ್ಟಮ್ಸ್ ಅಧಿಕಾರಿಗಳು ಶಿವಶಂಕರ್ರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ