ನೀಲಂಬೂರಿನಲ್ಲಿ ಗುಡ್ಡ ಕುಸಿತ: 80 ಮಂದಿ ಸಿಲುಕಿರುವ ಶಂಕೆ
Team Udayavani, Aug 9, 2019, 5:39 PM IST
ಮಲಪ್ಪುರಂ: ಕೇರಳದಲ್ಲಿ ಮಳೆ ಅನಾಹುತಗಳು ಮುಂದುವರಿದಿದ್ದು, ಶುಕ್ರವಾರದ ಘಟನೆಯೊಂದರಲ್ಲಿ ಗುಡ್ಡ ಕುಸಿದು 80 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಲಪ್ಪುರ ಜಿಲ್ಲೆಯ ನೀಲಂಬೂರಿನ ಪೊತ್ತುಕಲ್ಲು ಪಂಚಾಯತ್ ವ್ಯಾಪ್ತಿಯ ಭೂತನಂನಲ್ಲಿ ಗುಡ್ಡ ಕುಸಿದು ಮನೆಗಳ ಮೇಲೆ ಬಿದ್ದಿದೆ. ಈ ಭಾಗದಲ್ಲಿ ಸುಮಾರು 30 ಮನೆಗಳಿದ್ದು ನಿವಾಸಿಗಳು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.