ಕೇರಳ ಬಿಜೆಪಿ ಅಧ್ಯಕ್ಷರಾಗಿ ಶ್ರೀಧರನ್ ಪಿಳ್ಳೈ ನೇಮಕ
Team Udayavani, Jul 31, 2018, 6:00 AM IST
ಹೊಸದಿಲ್ಲಿ: ಕೇರಳದ ಬಿಜೆಪಿ ಅಧ್ಯಕ್ಷರನ್ನಾಗಿ ಶ್ರೀಧರನ್ ಪಿಳ್ಳೈರನ್ನು ನೇಮಕ ಮಾಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಕುಮ್ಮನಂ ರಾಜಶೇಖರನ್ರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ನೇಮಕ ಮಾಡಿದ ನಂತರ ಈ ಹುದ್ದೆ ಖಾಲಿ ಇತ್ತು. ಆರೆಸ್ಸೆಸ್ ಮುಖಂಡರಿಗೂ ಸಮ್ಮತವಾಗುವ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಯಲ್ಲಿ ನೇಮಕ ವಿಳಂಬವಾಗಿದೆ ಎನ್ನಲಾಗಿದೆ.
2003 ರಿಂದ 2006ರ ಅವಧಿಯಲ್ಲೂ ಇವರು ಅಧ್ಯಕ್ಷರಾಗಿದ್ದರು. ಪಕ್ಷದಲ್ಲಿ ಯಾವು ದೇ ಒಂದು ಗುಂಪಿಗೆ ಸೀಮಿತವಾಗಿಲ್ಲದ ಇವರು, ಹಿಂದುತ್ವದ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎನ್ನಲಾಗಿದೆ. ಯಾವುದೇ ವಿವಾದಕ್ಕೆ ಒಳಗಾಗದ ಪಿಳ್ಳೈ ಕ್ಲೀನ್ ಇಮೇಜ್ ಹೊಂದಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಚೆಂಗನ್ನೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಸೋತಿದ್ದರು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಪಕ್ಷವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಈಗ ಪಿಳ್ಳೆ„ ಮೇಲಿದೆ. ಇದೇ ವೇಳೆ ತ್ರಿಪುರಾದಲ್ಲಿ ಪಕ್ಷಕ್ಕೆ ಅಭೂತಪೂರ್ವ ಗೆಲುವಿಗ ಕಾರಣರಾದ ಸುನೀಲ್ ದೇವಧರ್ರನ್ನು ಆಂಧ್ರ ಪ್ರದೇಶ ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.