ಪಂಜಾಬ್ನಲ್ಲೂ “ಖಲಿಸ್ತಾನ ಪರ’ ಗೋಡೆಬರಹ!
ಸ್ಪ್ರೇ ಪೈಂಟ್ನಲ್ಲಿ ಖಲಿಸ್ತಾನ ಜಿಂದಾಬಾದ್ ಎಂದು ಬರೆದ ಕಿಡಿಗೇಡಿಗಳು
Team Udayavani, May 13, 2022, 10:30 PM IST
ಅಮೃತಸರ/ಧರ್ಮಶಾಲಾ:ಹಿಮಾಚಲಪ್ರದೇಶದ ವಿಧಾನಸಭೆಯ ಗೇಟ್ನಲ್ಲಿ ಖಲಿಸ್ತಾನ ಧ್ವಜವನ್ನಿಟ್ಟ ಪ್ರಕರಣದ ಬೆನ್ನಲ್ಲೇ ಈಗ ಪಂಜಾಬ್ನಲ್ಲೂ ಇದೇ ಮಾದರಿಯ ಘಟನೆಗಳು ಬೆಳಕಿಗೆ ಬರಲಾರಂಭಿಸಿವೆ.
ಪಂಜಾಬ್ನ ಫರೀದ್ಕೋಟ್ನ ಬಾಜಿಗಾರ್ ಬಸ್ತಿಯ ಉದ್ಯಾನವೊಂದರ ಗೋಡೆ ಮೇಲೆ “ಖಲಿಸ್ತಾನ ಜಿಂದಾಬಾದ್’ ಎಂದು ಸ್ಪ್ರೇ ಪೈಂಟ್ನಲ್ಲಿ ಬರೆಯಲಾಗಿದೆ.
ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಪೊಲೀಸರನ್ನು ಅಲರ್ಟ್ ಮಾಡಲಾಗಿದ್ದು, ಎಲ್ಲೆಡೆ ನಾಕಾ-ಚೆಕ್ಪೋಸ್ಟ್ ಕೂಡ ನಿರ್ಮಿಸಲಾಗಿದೆ.
ಹಿಮಾಚಲಪ್ರದೇಶ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾದ ಪಂಜಾಬ್ನ ಮೊರಿಂದಾ ನಿವಾಸಿ ಹರ್ವೀರ್ಸಿಂಗ್ ಎಂಬಾತನನ್ನು ಪೊಲೀಸರು ಬುಧವಾರವಷ್ಟೇ ಬಂಧಿಸಿದ್ದರು. ಹರ್ವೀರ್ ಜೊತೆ ಧರ್ಮಶಾಲಾಗೆ ತೆರಳಿ ಖಲಿಸ್ತಾನ ಧ್ವಜ ಹಾರಿಸಲು ನೆರವಾಗಿದ್ದ ಪರಮ್ಜಿತ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದೇ ಆರೋಪಿಗಳು ಏ.13ರಂದು ರೋಪಾರ್ನ ಉಪಆಯುಕ್ತರ ಕಚೇರಿ ಮುಂದೆಯೂ ಖಲಿಸ್ತಾನ ಧ್ವಜವನ್ನು ಹಾರಿಸಿದ್ದರು ಎಂದು ಹೇಳಲಾಗಿದೆ.
2 ಪಿಸ್ತೂಲು, ಲ್ಯಾಪ್ಟಾಪ್ ಪತ್ತೆ
ಮೇ 5ರಂದು ಭಾರೀ ಸ್ಫೋಟಕಗಳೊಂದಿಗೆ ಸಿಕ್ಕಿಬಿದ್ದಿದ್ದ ಪಂಜಾಬ್ನ ಗ್ಯಾಂಗ್ಸ್ಟರ್ಗಳ ಸಹಚರ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗುರುವಾರ ಫಿರೋಜ್ಪುರ ಗ್ರಾಮದಲ್ಲಿ ಶೋಧ ಕಾರ್ಯ ನಡೆಸಿದ್ದು, 2 ಪಿಸ್ತೂಲು, ಗುಂಡುಗಳು ಮತ್ತು ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ವಾರ ಹರ್ಯಾಣದ ಕರ್ನಾಲ್ನ ಟೋಲ್ ಪ್ಲಾಜಾದ ಬಳಿ ವಾಹನವೊಂದರಲ್ಲಿ ಭಾರೀ ಸ್ಫೋಟಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಖಲಿಸ್ತಾನಿ ಉಗ್ರ ಹರ್ವಿಂದ್ ಸಿಂಗ್ ರಿಂಡಾ ಜತೆ ನಂಟು ಹೊಂದಿರುವ ಗ್ಯಾಂಗ್ಸ್ಟರ್ಗಳನ್ನು ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
MUST WATCH
ಹೊಸ ಸೇರ್ಪಡೆ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ