ಕಿಸಾನ್ ಸಮ್ಮಾನ್ ನಿಧಿಗೆ ಇಂದು ಚಾಲನೆ
Team Udayavani, Feb 24, 2019, 12:30 AM IST
ಹೊಸದಿಲ್ಲಿ: ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ರವಿವಾರ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಪ್ರಧಾನಿ ಮೋದಿ ಅಧಿಕೃತ ಚಾಲನೆ ನೀಡಲಿದ್ದಾರೆ.
ರವಿವಾರವೇ ಕರ್ನಾಟಕ, ಉತ್ತರ ಪ್ರದೇಶ ಸಹಿತ ಒಟ್ಟು 14 ರಾಜ್ಯಗಳ 1 ಕೋಟಿ ರೈತರ ಖಾತೆಗಳಿಗೆ ಮೊದಲ ಕಂತಾಗಿ ತಲಾ 2 ಸಾವಿರ ರೂ. ವರ್ಗಾವಣೆಯಾಗಲಿದೆ. ಬಳಿಕದ 2-3 ದಿನಗಳಲ್ಲಿ 28 ರಾಜ್ಯಗಳ ಮತ್ತೆ 1 ಕೋಟಿ ಕೃಷಿಕರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ.
ಕೇಂದ್ರವು ಸ್ಟೇಟ್ ನೋಶನಲ್ ಅಕೌಂಟ್ ಮೂಲಕ ಅರ್ಹ ಫಲಾನುಭವಿಯ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂ.ಗಳಂತೆ 3 ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ರೂ. ಜಮೆ ಮಾಡುತ್ತದೆ.