ಕೊಡಿಯೇರಿ ಪುತ್ರನಿಂದ 13 ಕೋಟಿ ರೂ.ವಂಚನೆ?
Team Udayavani, Jan 26, 2018, 8:25 AM IST
ತಿರುವನಂತಪುರ: ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೊಯ್ ವಿನೋದಿನಿ ಬಾಲಕೃಷ್ಣನ್ ಯುಎಇ ಉದ್ಯಮಿಗೆ 13 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಸನ್ ಇಸ್ಮಾಯಿಲ್ ಅಬ್ದುಲ್ಲಾ ಅಲ್ಮಝೂಕಿ ಎಂಬವರು ದುಬೈ ಪೊಲೀಸರಿಗೆ ದೂರು ನೀಡಿದ ಉದ್ಯಮಿ. ಅವರ ಪ್ರಕಾರ ಬಿನೊಯ್ ವಿರುದ್ಧ 5 ಕ್ರಿಮಿನಲ್ ಕೇಸುಗಳನ್ನು ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಹೊಸದಿಲ್ಲಿಯಲ್ಲಿರುವ ಸಿಪಿಎಂ ಪ್ರಧಾನ ಕಚೇರಿಗೆ ಕೂಡ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪ ಕುರಿತು ಇ.ಡಿ. ತನಿಖೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಕೇರಳ ಸಿಎಂ ಅವರು ತನಿಖೆ ಬೇಕಿಲ್ಲ ಎಂದಿದ್ದಾರೆ.