ಇಂದಿನಿಂದ ಕೋವಿಂದ್ ರಾಷ್ಟ್ರ ಪ್ರವಾಸ ಆರಂಭ
Team Udayavani, Jun 25, 2017, 3:45 AM IST
ಲಕ್ನೋ/ಹೊಸದಿಲ್ಲಿ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ರವಿವಾರದಿಂದ ತಮ್ಮ ರಾಷ್ಟ್ರಪ್ರವಾಸ ಆರಂಭಿಸಲಿದ್ದಾರೆ. ಎಲೆಕ್ಟೋ ರಲ್ ಕಾಲೇಜಿನ ಅತಿ ಹೆಚ್ಚು ಮತಗಳನ್ನು ಹೊಂದಿರುವ ಉತ್ತರ ಪ್ರದೇಶದಿಂದಲೇ ಕೋವಿಂದ್ ಅವರು ತಮ್ಮ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ.
ಅವರು ದೇಶವ್ಯಾಪಿ ಪ್ರವಾಸ ಮಾಡಿ ಲೋಕಸಭೆ, ರಾಜ್ಯಸಭೆ, ರಾಜ್ಯಗಳು, ಕೇಂದ್ರಾ ಡಳಿತ ಪ್ರದೇಶಗಳ ಚುನಾಯಿತ ಪ್ರತಿನಿಧಿ ಗಳನ್ನು ಭೇಟಿ ಮಾಡಿ ತಮಗೆ ಮತ ಹಾಕುವಂತೆ ಮನವಿ ಮಾಡಲಿದ್ದಾರೆ. ಇದೇ ವೇಳೆ, ವಿಪಕ್ಷ ಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಅವರೂ ರವಿವಾರ ಲಕ್ನೋಗೆ ಆಗಮಿಸ ಲಿದ್ದು, ಅವರೂ ಕೋವಿಂದ್ ಮಾದರಿಯಲ್ಲೇ ಮತ ಯಾಚಿಸುವ ಸಾಧ್ಯತೆಯಿದೆ. ಮೀರಾಕುಮಾರ್ಗೆ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್ ಅವರು ಸಾಥ್ ನೀಡಲಿದ್ದಾರೆ.
ಇನ್ನೊಂದೆಡೆ, ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಚುನಾವಣೆಗಾಗಿ ವಿಶೇಷವಾದ ಪೆನ್ ಮತ್ತು ಶಾಯಿಯನ್ನು ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಈ ಪೆನ್ ಹಾಗೂ ಶಾಯಿಯನ್ನು ದಿಲ್ಲಿಯಿಂದ ಲಕ್ನೋಗೆ ತರಿಸ ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿತೀಶ್ ಮತ್ತೆ ಎನ್ಡಿಎ ಸೇರಲಿ
ರಾಷ್ಟ್ರಪತಿ ಚುನಾವಣೆಯಲ್ಲಿ ಕೋವಿಂದ್ ಅವರಿಗೆ ಬೆಂಬಲ ನೀಡುವ ತಮ್ಮ ನಿಲುವಿಗೆ ಬದ್ಧವಾದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಶ್ಲಾ ಸಿದ್ದಾರೆ. ಅಲ್ಲದೆ, ನಿತೀಶ್ ಅವರನ್ನು ಮತ್ತೆ ಎನ್ಡಿಎಗೆ ಸೇರುವಂತೆಯೂ ಆಹ್ವಾನಿಸಿದ್ದಾರೆ. “ಬಿಹಾರದ ಮಗಳು ಮೀರಾಕುಮಾರ್ರನ್ನು ಪ್ರತಿಪಕ್ಷಗಳು ಹರಕೆಯ ಕುರಿಯಾಗಿಸಲು ಹೊರಟಿವೆ ಎಂಬ ನಿತೀಶ್ ಮಾತು ಸರಿಯಾದದ್ದು. ಈಗ ನಿತೀಶ್ ಅವರು ಎರಡು ದೋಣಿ ಗಳ ಮೇಲೆ ಕಾಲಿಡಬಾರದು. ಆದಷ್ಟು ಬೇಗ ಅವರು ಎನ್ಡಿಎಗೆ ಸೇರ್ಪಡೆ ಗೊಳ್ಳಬೇಕು,’ ಎಂದಿದ್ದಾರೆ ಪಾಸ್ವಾನ್.
ರಾಷ್ಟ್ರಪತಿಯಾದವರಿಗೆ ಇರಬೇಕಾದ್ದು ಒಂದೇ ಒಂದು ಸಿದ್ಧಾಂತ- ಅದು ಭಾರತದ ಸಂವಿಧಾನ. ಹುದ್ದೆಯ ಘನತೆ ಕಾಪಾಡುವುದು ಮತ್ತು ಸಂವಿಧಾನವನ್ನು ಅನುಸರಿಸುವುದು. ಇಲ್ಲಿ ಸೈದ್ಧಾಂತಿಕ ಹೋರಾಟದ ಪ್ರಶ್ನೆಯೇ ಉದ್ಭವಿಸಬಾರದು.
– ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ಜು.17ರಿಂದ ಅಧಿವೇಶನ
ರಾಷ್ಟ್ರಪತಿ ಚುನಾವಣೆ ನಡೆವ ದಿನವೇ ಸಂಸತ್ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಜು.17ರಿಂದ ಆ. 11ರ ವರೆಗೆ ಅಧಿವೇಶನ ನಡೆಸುವಂತೆ ಸಂಸ ದೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಶಿಫಾರಸು ಮಾಡಿದೆ. ಪ್ರತಿ ವರ್ಷವೂ ಜುಲೈ ಅಂತ್ಯದಲ್ಲಿ ಅಧಿವೇಶನ ನಡೆಸಲಾಗುತ್ತದೆ ಯಾದರೂ ಈ ಬಾರಿ ರಾಷ್ಟ್ರಪತಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಅಧಿವೇಶನವನ್ನು ಸ್ವಲ್ಪ ಮುಂಚಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಜು.17ರಂದೇ ಅಧಿವೇಶನ ಆರಂಭಿಸುವ ಮೂಲಕ ಎಲ್ಲ 776 ಸದಸ್ಯರೂ ದಿಲ್ಲಿ ಯಲ್ಲಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿ ಎಂಬುದೂ ಸರಕಾರದ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಆದರೂ ಸಂಸದರು ಮಾತ್ರ ತಮ್ಮ ತಮ್ಮ ರಾಜ್ಯಗಳಲ್ಲಿ ಇದ್ದುಕೊಂಡೇ ಮತ ಚಲಾಯಿಸಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ