“ಮದ್ಯ”ದಂಗಡಿಯಲ್ಲಿ ಹತ್ತು ರೂ.ಗಾಗಿ ಗೆಳೆಯರ ನಡುವೆ ಮಾರಾಮಾರಿ, ಕೊಲೆ ಯತ್ನ!
Team Udayavani, Nov 18, 2019, 5:42 PM IST
ಆಂಧ್ರಪ್ರದೇಶ: ಹತ್ತು ರೂಪಾಯಿ ಸಾಲದ ವಿಚಾರವಾಗಿ ಇಬ್ಬರು ಕುಡುಕರ ನಡುವೆ ಮಾರಾಮಾರಿ ನಡೆದಿದ್ದು, ಕೊಲೆ ಯತ್ನ ನಡೆಸಿರುವ ಘಟನೆ ಕರ್ನೂಲ್ ನ ಸುನ್ನಿಪೆಂಟಾ ವೈನ್ ಶಾಪ್ ನಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇಬ್ಬರ ವಿರುದ್ಧವೂ ಕೊಲೆ ಯತ್ನ ನಡೆಸಿರುವ ಆರೋಪದಡಿ ಸುನ್ನಿಪೆಂಟಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವುದಾಗಿ ಡಿವೈಎಸ್ಪಿ ವೆಂಕಟ್ ರಾವ್ ತಿಳಿಸಿದ್ದಾರೆ.
ರಿಕ್ಷಾ ಚಾಲಕ ಮೌಲಾಲಿ ಹಾಗೂ ಗೆಳೆಯ ಶಿವ ಇಬ್ಬರು ಮದ್ಯವನ್ನು ಕುಡಿದಿದ್ದರು. ಬಳಿಕ ಮೌಲಾಲಿ ಗೆಳೆಯನ ಬಳಿ ಹತ್ತು ರೂಪಾಯಿ ಸಾಲ ಕೇಳಿದ್ದ. ಆಗ ಶಿವ ಮೌಲಾಲಿಯ ತಾಯಿ ಮತ್ತು ಸಹೋದರಿಯ ವಿರುದ್ಧ ಅವಾಚ್ಯವಾಗಿ ಬೈದಿದ್ದ.
ಇದರಿಂದ ಕೋಪಗೊಂಡ ಮೌಲಾಲಿ ಬಿಯರ್ ಬಾಟಲ್ ಒಡೆದು ಶಿವನ ಗಂಟಲನ್ನು ಸೀಳಲು ಮುಂದಾಗಿದ್ದ. ಇಬ್ಬರ ನಡುವೆಯೂ ಮಾರಾಮಾರಿ ನಡೆದಿತ್ತು. ಅಷ್ಟರಲ್ಲಿ ವೈನ್ ಶಾಪ್ ನಲ್ಲಿದ್ದ ಕೆಲವರು ಮಧ್ಯಪ್ರವೇಶಿಸಿ ಅನಾಹುತವನ್ನು ತಪ್ಪಿಸಿದ್ದರು.
ಮೌಲಾಲಿ ಗಾಯಗೊಂಡಿದ್ದು, ಆತನನ್ನು ಕೂಡಲೇ ಮರ್ಕಾಪುರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಡಿವೈಎಸ್ಪಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು