1962ರಲ್ಲಿ ಚೀನಾ ಭಾರತದ ಎಷ್ಟು ಜಾಗ ವಶಪಡಿಸಿಕೊಂಡಿತ್ತು ಗೊತ್ತಾ? ರಾಹುಲ್ ಗೆ ಖಡಕ್ ತಿರುಗೇಟು
ಲಡಾಖ್ ನ ಒಂದಿಂಚೂ ಭೂಮಿಯನ್ನು ಚೀನಿಯರ ಸ್ವಾಧೀನಕ್ಕೆ ಬಿಟ್ಟುಕೊಟ್ಟಿಲ್ಲ ಎಂಬುದನ್ನು ಜಮ್ಯಾಂಗ್ ಸಾಕ್ಷಿ ಸಹಿತ ವಿವರ
Team Udayavani, Jun 10, 2020, 4:13 PM IST
ನವದೆಹಲಿ: ಭಾರತ, ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಳಿರುವ ಪ್ರಶ್ನೆಗೆ ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಖಡಕ್ ತಿರುಗೇಟನ್ನು ನೀಡಿದ್ದಾರೆ. ಒಂದು ವೇಳೆ ಲಡಾಖ್ ನಲ್ಲಿ ಚೀನಾ ಭಾರತದ ಎಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬುದನ್ನು ಭಾರತ ಸರ್ಕಾರ ವಿವರಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಕೇಳಿರುವ ಪ್ರಶ್ನೆಗೆ ಜಮ್ಯಾಂಗ್ ಈ ರೀತಿ ಕಟು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಲಡಾಖ್ ನ ಒಂದಿಂಚೂ ಭೂಮಿಯನ್ನು ಚೀನಿಯರ ಸ್ವಾಧೀನಕ್ಕೆ ಬಿಟ್ಟುಕೊಟ್ಟಿಲ್ಲ ಎಂಬುದನ್ನು ಜಮ್ಯಾಂಗ್ ಸಾಕ್ಷಿ ಸಹಿತವಾಗಿ ಭಾರತದ ಭೂಮಿ ಸುರಕ್ಷಿತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಚೀನಾ ಭಾರತದ ಭೂಮಿಯನ್ನು ಕಬಳಿಸಿತ್ತು…ಇದು ನಡೆದದ್ದು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ. 1962ರ ಯುದ್ಧದಲ್ಲಿ ಚೀನಾ ಪೂರ್ವ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡು ಅಕ್ಸಾಯಿ ಚಿನ್ ನ ಸುಮಾರು 38 ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಆಕ್ರಮಿಸಿಕೊಂಡಿತ್ತು ಎಂಬುದಾಗಿ ಜಮ್ಯಾಂಗ್ ರಾಹುಲ್ ಗೆ ತಿರುಗೇಟು ನೀಡಿದ್ದಾರೆ.
ಚೀನಾ ಭಾರತದ ಭೂಮಿಯನ್ನು ಹೇಗೆ ವಶಪಡಿಸಿಕೊಂಡಿತ್ತು ಎಂಬುದನ್ನು 34ರ ಹರೆಯದ ಬಿಜೆಪಿ ಸಂಸದ ನಮ್ಗ್ಯಾಲ್ ವಿವರಿಸಿದ್ದು, ರಾಹುಲ್ ಗಾಂಧಿ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನನ್ನ ಸತ್ಯಾಧಾರಿತ ಪ್ರತಿಕ್ರಿಯೆಯನ್ನು ಒಪ್ಪುವುದಾದರೆ ಕಾಂಗ್ರೆಸ್ ಮತ್ತೊಮ್ಮೆ ದಿಕ್ಕುತಪ್ಪಿಸುವ ಹೇಳಿಕೆಯನ್ನು ನೀಡಲಾರದು ಎಂಬ ಭರವಸೆ ಹೊಂದಿರುವುದಾಗಿ ಜಮ್ಯಾಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆಡಳಿತಾರೂಢ ಕೇಂದ್ರ ಸರ್ಕಾರದ ವಿರುದ್ಧ ಸತತವಾಗಿ ಟೀಕೆ ವ್ಯಕ್ತಪಡಿಸುತ್ತ ಬಂದಿದ್ದ ರಾಹುಲ್ ಗಾಂಧಿ ಬುಧವಾರವೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು, ಚೀನಾ ಸೇನೆ ಲಡಾಖ್ ನಲ್ಲಿರುವ ನಮ್ಮ ಸರಹದ್ದಿನೊಳಗೆ ಬಂದು ಭೂಮಿಯನ್ನು ವಶಪಡಿಸಿಕೊಂಡಿತ್ತು. ಆದರೆ ನಮ್ಮ ಪ್ರಧಾನಿ ಮೌನವಾಗಿದ್ದರು. ಅಲ್ಲದೇ ಈ ವಿವಾದದಿಂದ ದೂರ ಉಳಿದುಬಿಟ್ಟಿದ್ದರು ಎಂದು ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ