ಇನ್ನು ಲಕ್ಷ್ಮಣ ಝೂಲಾ ಬಂದ್
ಹಳೆಯದಾಗಿರುವ 90 ವರ್ಷದ ಸೇತುವೆ ಎಂದು ಎಚ್ಚರಿಕೆ
Team Udayavani, Jul 13, 2019, 5:00 AM IST
ಡೆಹ್ರಾಡೂನ್: ಉತ್ತರಾಖಂಡದಲ್ಲಿರುವ ಪವಿತ್ರ ತೀರ್ಥ ಕ್ಷೇತ್ರ ಋಷಿಕೇಶಕ್ಕೆ ಹೋದರೆ ಇನ್ನು ಐತಿಹಾಸಿಕ “ಲಕ್ಷ್ಮಣ ಝೂಲಾ’ದಲ್ಲಿ ನಡೆಯಲು, ಫೋಟೋ ತೆಗೆಯಲು ಸಾಧ್ಯವಿಲ್ಲ. 1923ರಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ಯಾವುದೇ ಹಂತದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿ ಇದೆ. ಹೀಗಾಗಿ, ಅದರಲ್ಲಿ ನಡೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಓಂಪ್ರಕಾಶ್ ಶುಕ್ರವಾರ ತಿಳಿಸಿದ್ದಾರೆ. ಲೋಕೋ ಪಯೋಗಿ ಇಲಾಖೆಯ ಅಧಿಕಾ ರಿಗಳು ಮತ್ತು ತಜ್ಞರ ತಂಡ ಸೇತುವೆ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಶಿಫಾರಸು ಮಾಡಿದೆ.
ಬ್ರಿಟೀಷರು ದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ವೇಳೆ ಗಂಗಾ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿತ್ತು. ಪೌರಿ ಜಿಲ್ಲೆಯ ಜೋಂಕ್ ಎಂಬಲ್ಲಿಂದ ತೆಹ್ರಿ ಜಿಲ್ಲೆಯಲ್ಲಿರುವ
ತಪೋವನ ಎಂಬ ಗ್ರಾಮಕ್ಕೆ ಈ ಸೇತುವೆ ಮೂಲಕ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿತ್ತು. ಬಾಲಿವುಡ್ನ “ಗಂಗಾ ಕಿ ಸೌಗಂಧ್’, “ಸನ್ಯಾಸಿ’ ಸೇರಿದಂತೆ ಹಲವು ಯಶಸ್ವಿ ಸಿನೆಮಾಗಳು ಇಲ್ಲಿ ಚಿತ್ರೀಕರಣ ಗೊಂಡಿವೆ. 284 ಅಡಿ ಉದ್ದದ ಈ ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಉಯ್ನಾಲೆಯಂತೆ ತೂಗಾಡುತ್ತಿದ್ದ ಕಾರಣ “ಝೂಲಾ’ ಎಂಬ ಹೆಸರು ಬಂದಿದೆ. ಶ್ರೀರಾಮನ ಸಹೋದರ ಲಕ್ಷ್ಮಣ ಹಗ್ಗದ ಸಹಾಯದಿಂದ ನದಿ ದಾಟಿದ್ದರಿಂದ ಈ ಸೇತುವೆಗೆ “ಲಕ್ಷ್ಮಣ ಝೂಲಾ’ ಎಂಬ ಹೆಸರು ಬಂದಿದೆ. ’90ರ ದಶಕದಲ್ಲಿ ಸಮೀಪದಲ್ಲಿಯೇ ರಾಮ ಝೂಲಾ ಎಂಬ ಹೆಸರಿನ ಸೇತುವೆ ನಿರ್ಮಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು