ಅಯೋಧ್ಯೆ ಭೂ ದರ ತಿಂಗಳಲ್ಲೇ ಡಬಲ್
ಮಂದಿರ ಭೂಮಿಪೂಜೆ ಬಳಿಕ ಗರಿಗೆದರಿದ ರಿಯಲ್ ಎಸ್ಟೇಟ್
Team Udayavani, Sep 22, 2020, 5:50 AM IST
ಅಯೋಧ್ಯೆ: ಐತಿಹಾಸಿಕ ರಾಮಮಂದಿರಕ್ಕೆ ಭೂಮಿಪೂಜೆ ನಡೆದ ಒಂದೇ ತಿಂಗಳಲ್ಲಿ ಅಯೋಧ್ಯೆಯ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ!
ಹೌದು, ಸುಪ್ರೀಂ ಕೋರ್ಟ್ ತೀರ್ಪು ನೀಡುವ ಸಂದರ್ಭದಲ್ಲಿ ಅಯೋಧ್ಯೆ ಪಟ್ಟಣದಲ್ಲಿ ನಿವೇಶನಗಳು ಚದರ ಅಡಿಗೆ 900 ರೂ.ನಂತೆ ಮಾರಾಟಗೊಳ್ಳುತ್ತಿದ್ದವು. ಈಗ ಈ ದರ ದುಪ್ಪಟ್ಟಾಗಿದೆ. “ಪ್ರಸ್ತುತ ಪಟ್ಟಣದ ಹೃದಯ ಭಾಗದಲ್ಲಿ ನಿವೇಶನ ಮೌಲ್ಯ ಪ್ರತಿ ಚದರ ಅಡಿಗೆ 2000-3000 ಸಾವಿರ ರೂ. ನಡೆಯುತ್ತಿದೆ. ಅಯೋಧ್ಯೆ ಹೊರವಲಯದ ನಿವೇಶನಗಳ ದರ 1000- 1500 ರೂ.ಗೆ ಏರಿದೆ’ ಎಂದು ಆಸ್ತಿ ಖರೀದಿ ಸಲಹೆಗಾರ ರಿಶಿ ಟಂಡನ್ ತಿಳಿಸಿದ್ದಾರೆ.
“ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಆಸ್ತಿ ಖರೀದಿಗೆ ಪೈಪೋಟಿ ನಡೆಸುತ್ತಿದ್ದಾರೆ. ದೇಶದ ಇತರೆ ಭಾಗದ ಸಿರಿವಂತರೂ ಇಲ್ಲಿನ ಜಮೀನುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಧರ್ಮಶಾಲೆ, ಸಮುದಾಯ ಪಾಕಶಾಲೆಯಂಥ ಧಾರ್ಮಿಕ ಉದ್ದೇಶಗಳಿಗೆ ಕೆಲವರು ಭೂಮಿ ಖರೀದಿಸು ತ್ತಿದ್ದರೆ, ಮತ್ತೆ ಕೆಲವರು ಭವಿಷ್ಯದ ಹೂಡಿಕೆಯ ಉದ್ದೇಶ ಹೊಂದಿದ್ದಾರೆ. ಹಲವು ಆಸ್ತಿಗಳು ಮಾಲೀಕತ್ವ ವಿವಾದ ಹೊಂದಿವೆ. ಸರಯೂ ತೀರದ ಗದ್ದೆಗಳ ಮಾರಾಟದ ಮೇಲೆ ಹಸಿರು ನ್ಯಾಯಾಧಿಕರಣ ಕಟ್ಟುನಿಟ್ಟಿನ ನಿಗಾ ವಹಿಸಿದೆ.
ದಿಢೀರ್ ಏರಿದ್ದೇಕೆ?
ಅಯೋಧ್ಯೆಯನ್ನು ವಿಶ್ವದ ಧಾರ್ಮಿಕ ಕೇಂದ್ರವಾಗಿಸಲು ಪ್ರಧಾನಿ ಶಪಥ.
ಸಿಎಂ ಯೋಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಿಸಿದ್ದು.
3 ಸ್ಟಾರ್ ಹೋಟೆಲ್ಗಳ ನಿರ್ಮಾಣಕ್ಕೆ ಉದ್ಯಮಿಗಳು ಮುಗಿಬಿದ್ದಿರುವುದು.
ವಿವಿಧ ಧಾರ್ಮಿಕ ಯೋಜನೆಗಳಿಗೆ ಸರಕಾರ ಬೃಹತ್ ಪ್ರಮಾಣದಲ್ಲಿ ಭೂಮಿ ಖರೀದಿಸುತ್ತಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ