ಅಮರನಾಥ ಯಾತ್ರೆ ಮೇಲೆ ದಾಳಿಗೆ ಸಂಚು
Team Udayavani, Jul 29, 2018, 6:00 AM IST
ಹೊಸದಿಲ್ಲಿ / ಶ್ರೀನಗರ: ಪವಿತ್ರ ಅಮರನಾಥ ಯಾತ್ರೆ ಮುಂದುವರಿದಿರುವಂತೆಯೇ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪಾಕಿಸ್ಥಾನದ ಲಷ್ಕರ್ -ಎ- ತಯ್ಯಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳು ಯಾತ್ರಿಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ತಾಲೀಮು ನಡೆಸಿದ್ದು, ಆ. 26ರಂದು ಯಾತ್ರೆ ಮುಕ್ತಾಯವಾಗುವ ಮುನ್ನ ಉಗ್ರರ ದಾಳಿ ನಡೆಯುವ ಅಪಾಯ ದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಯಾವ ರೀತಿ ದಾಳಿ ನಡೆಸಬೇಕು ಎಂಬ ಬಗ್ಗೆ ಜು. 16 ಮತ್ತು 17ರಂದು ಎರಡೂ ಉಗ್ರ ಸಂಘಟನೆಯ ಹಿರಿಯ ನಾಯಕರು ಲೆಕ್ಕಾಚಾರ ಹಾಕಿದ್ದಾರೆ. ಯಾತ್ರಿಕರು ತೆರಳುವ ದಾರಿ, ಆಸುಪಾಸಿನ ಸ್ಥಳಗಳಿಗೂ ತೆರಳಿ ಪರಿಶೀಲಿಸಿದ್ದಾರೆ ಎಂದು ಬೇಹು ಸಂಸ್ಥೆಗಳು ಎಚ್ಚರಿಕೆ ನೀಡಿದ್ದಾಗಿ “ಇಂಡಿಯಾ ಟುಡೇ’ ವರದಿ ಮಾಡಿದೆ. ಲಷ್ಕರ್ ಕಮಾಂಡರ್ ಅಬು ಹುರಾರಿಯಾ ಎಂಬಾತ ಶ್ರೀನಗರದ ಗುಲಾಬ್ ಬಾಗ್ ಮತ್ತು ಝಕೂರಾ ಪ್ರದೇಶದಲ್ಲಿ ನೆಲೆಸಿದ್ದು, ಈ ಬಗ್ಗೆ ಯೋಜನೆ ರೂಪಿಸಿದ್ದಾನೆ. ಅದೇ ಸಂಘಟನೆಯ ಮತ್ತೂಬ್ಬ ಸಲೀಮ್ ಪಾರಿ ಯಾತ್ರೆಯ ಸ್ಥಳವಾಗಿರುವ ಖುಸರ್ಪೋರಾ ಮತ್ತುಹಜಿನ್ ಎಂಬಲ್ಲಿ ಇದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಮಿರ್ ಝರ್ಗಾಮ್ ಎಂಬಾತನೂ ಅಲ್ಲೇ ಇದ್ದ.
ಹಿಜ್ಬುಲ್ ಮುಜಾಹಿದೀನ್ನ ಮುಝಾಫರ್ ಭಟ್ ಎಂಬಾತ ಕುಲ್ಗಾಂವ್ನ ಛೆಡ್ಡರ್ ಮತ್ತು ಮತಾಲ್ಹಾಮಾ, ಅದೇ ಸಂಘ ಟನೆಯ ಅಬ್ಟಾಸ್ ಶೇಖ್ ಎಂಬಾತ ಗಂಜೀಪೊರಾ ಮತ್ತು ಗಾಸ್ಸಿ ಪೊರಾ ಎಂಬಲ್ಲಿ ಇದ್ದ ಬಗ್ಗೆ ಖಚಿತ ಸುಳಿವು ಕೇಂದ್ರ ಗುಪ್ತಚರ ಸಂಸ್ಥೆಗಳಿಗೆ ಲಭಿಸಿವೆ. ಅಲ್ಲದೆ ಹಿಜ್ಬುಲ್ ಮುಜಾಹಿದೀನ್ ನಿಕಟ ಸಂಪರ್ಕ ಹೊಂದಿರುವ ರಿಯಾಜ್ ನೈಕೂ ಎಂಬ ಸಂಘಟನೆಯ ಲತೀಫ್ ದರ್ ಎಂಬ ಉಗ್ರ ಪದ್ಗಾಂಪುರ ಸಮೀಪ ಇದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಐವರು ಉಗ್ರರು ದಾಳಿ ಸ್ಥಳಗಳ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿರುವುದು ಸ್ಪಷ್ಟವಾಗಿದೆ.
ಮತ್ತೂಂದು ತಂಡ ರವಾನೆ
ಶನಿವಾರ 663 ಮಂದಿಯ ಮತ್ತೂಂದು ತಂಡ ಅಮರನಾಥ ಯಾತ್ರೆಗಾಗಿ ತೆರಳಿದೆ.
ಸಿಆರ್ಪಿಎಫ್ ಮೇಲೆ ದಾಳಿ
ಇನ್ನೊಂದೆಡೆ ಕಣಿವೆ ರಾಜ್ಯದ ಆವಂತಿಪುರದಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್ಪಿಎಫ್ ಸಿಬಂದಿ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಐವರು ಸಿಬಂದಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಹಿಂದೆ ನಡೆದಿದ್ದ ದಾಳಿಗಳು
2017 ಜುಲೈ 10: 08
2001 ಜುಲೈ 20: 13
2000 ಆಗಸ್ಟ್ 2: 89
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ