ಶ್ರೀನಗರ ಸಿಆರ್ಪಿಎಫ್ ದಾಳಿ: ಇಬ್ಬರು ಎಲ್ಇಟಿ ಉಗ್ರರ ಹತ್ಯೆ
Team Udayavani, Feb 13, 2018, 4:11 PM IST
ಕಾಶ್ಮೀರ : ”ಶ್ರೀನಗರದ ಕರಣ್ ನಗರದಲ್ಲಿನ ಸಿಆರ್ಪಿಎಫ್ ಕ್ಯಾಂಪ್ ಮೇಲೆ ಲಷ್ಕರ ಎ ತಯ್ಯಬ ಉಗ್ರರು ದಾಳಿಗೆ ಯತ್ನಿಸಿದ್ದರು. ಅವರನ್ನು 24 ತಾಸುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ” ಎಂದು ಕಾಶ್ಮೀರ ಐಜಿಪಿ ಎಸ್ ಪಿ ಪಾಣಿ ಅವರು ಶ್ರೀನಗರದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಓರ್ವ ಸಿಆರ್ಪಿಎಫ್ ಜವಾನ ಗಾಯಗೊಂಡಿದ್ದು ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಪಾಣಿ ತಿಳಿಸಿದರು.
ಸಿಆರ್ಪಿಎಫ್ ಕ್ಯಾಂಪ್ ಮೇಲೆ ಲಷ್ಕರ್ ಉಗ್ರರ ದಾಳಿ ಯತ್ನ ನಿನ್ನೆ ಸೋಮವಾರ ಆರಂಭಗೊಂಡಿತ್ತು. ಒಂದು ದಿನ ಪೂರ್ತಿ ಉಗ್ರರೊಂದಿಗೆ ಗುಂಡಿನ ಕಾಳಗ ನಡೆದಿತ್ತು. ಕರಣ್ ನಗರ ಪ್ರದೇಶದಲ್ಲಿನ ನಿರ್ಮಾಣ ಹಂತದಲ್ಲಿದ್ದ ಕಟ್ಟಡದೊಳಗೆ ಉಗ್ರರು ಅಡಗಿಕೊಂಡಿದ್ದರು. ಅವರನ್ನು ಬೆನ್ನಟ್ಟಿ ಗುಂಡಿಟ್ಟು ಸಾಯಿಸಲಾಯಿತು ಎಂದು ಪಾಣಿ ತಿಳಿಸಿದರು.
ಈ ಮೊದಲು ಸಂಜ್ವಾನಾ ಮತ್ತು ಕರಣ್ ನಗರ ಸಿಆರ್ಪಿಎಫ್ ಶಿಬಿರದ ಮೇಲಿನ ಉಗ್ರ ದಾಳಿ ತನ್ನದೇ ಕೃತ್ಯ ಎಂದು ಜೈಶ್ ಎ ಮೊಹಮ್ಮದ್ ಹೇಳಿಕೊಂಡಿತ್ತು.
ಕಳೆದ ಶನಿವಾರ ಸಂಜ್ವಾನಾ ಸೇನಾ ಶಿಬಿರದ ಮೇಲೆ ನಡೆದಿದ್ದ ದಾಳಿಯು ಉರಿ ಸೇನಾ ಶಿಬಿರದ ಮೇಲೆ ನಡೆದಿದ್ದ ದಾಳಿಯ ಬಳಿಕದ ಅತ್ಯಂತ ಘೋರ ಉಗ್ರ ದಾಳಿ ಎನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್