ಮುಂದಿನ ವರ್ಷದಿಂದ ಜೀವವಿಮೆ ಪಾಲಿಸಿಗಳಲ್ಲಿ ಬದಲಾವಣೆ
2020 ಫೆ.1ರಿಂದ ಅನ್ವಯ; ಬದಲಾವಣೆಗಳು ಏನೇನು?
Team Udayavani, Dec 14, 2019, 7:23 PM IST
ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ ಬರಲಿದೆ. ಈ ಬದಲಾವಣೆಗಳು ಹೀಗಿವೆ.
1. ಒಂದು ವೇಳೆ ಯುನಿಟ್ ಲಿಂಕ್ ಆದ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ಯುನಿಟ್ ಲಿಂಕೇತರ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಐದು ವರ್ಷಗಳ ವರೆಗೆ ವಿಸ್ತರಿಸಲಾಗುತ್ತದೆ. ಈ ಮೊದಲು ಇದು ಎರಡು ವರ್ಷಗಳಾಗಿತ್ತು. ಪುನರುಜ್ಜೀವಿತ ಅವಧಿ ಎಂದರೆ, ಮೊದಲ ಬಾರಿಗೆ ಪಾಲಿಸಿದಾರನು ಕಟ್ಟದೇ ಇರುವ ಪ್ರೀಮಿಯಂ ದಿನಾಂಕದಿಂದ ಮತ್ತೆ ಆತ ಸ್ಥಗಿತಗೊಂಡ ಪಾಲಿಸಿಯನ್ನು ಚಾಲನೆಗೊಳಿಸಲು ಮುಂದಾದ ಅವಧಿಯಾಗಿದೆ.
2. ಫೆಬ್ರವರಿಯಿಂದ ನಿವೃತ್ತಿ ಪ್ಲ್ರಾನ್ಗಳ ವಿತ್ಡ್ರಾವಲ್ ಮಿತಿ ಏರಿಕೆಯಾಗಲಿದೆ. ಗರಿಷ್ಠ ವಿತ್ಡ್ರಾವಲ್ ಮಿತಿಯು ಈಗಿರುವ ಮೂರನೇ ಒಂದು ಭಾಗದ ಬದಲಾಗಿ ಮೆಚೂÂರಿಟಿಯ ಶೇ.60ರಷ್ಟು ಆಗಲಿದೆ. ಆದರೆ ನಿವೃತ್ತಿ ಪ್ಲ್ರಾನ್ಗಳಲ್ಲಿ ಮೂರನೇ ಒಂದು ಭಾಗದಷ್ಟಕ್ಕೆ ಮಾತ್ರ ತೆರಿಗೆ ವಿನಾಯಿತಿ ಇರಲಿದ್ದು, ಎಲ್ಲ ಶೇ.60ರಷ್ಟಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ.
3. ಪಾಲಿಸಿಗಳ ಮೇಲಿನ ಐದು ವರ್ಷಗಳ ಲಾಕ್ ಅವಧಿ ಮುಗಿದ ಬಳಿಕ ಶೇ.25ರಷ್ಟು ವಿತ್ಡ್ರಾವಲ್ಗೆ ಅನುಮತಿ ನೀಡುವ ಬಗ್ಗೆಯೂ ಐಆರ್ಡಿಎಐ ಆಲೋಚನೆ ನಡೆಸುತ್ತಿದೆ. ಭಾಗಶಃ ವಿತ್ಡ್ರಾವಲ್ ಅನ್ನು ಉನ್ನತ ವ್ಯಾಸಂಗಕ್ಕಾಗಿ, ಮಕ್ಕಳ ವಿವಾಹ, ಗಂಭೀರ ಕಾಯಿಲೆಗಳು, ಆಸ್ತಿ ನಿವೇಶನ ಖರೀದಿ ಅಥವಾ ಮನೆಕಟ್ಟುವ ಉದ್ದೇಶಕ್ಕೆ ನೀಡಲು ಯೋಜಿಸಲಾಗುತ್ತಿದೆ.
4. 45 ವರ್ಷಕ್ಕಿಂತ ಕಡಿಮೆಯಿದ್ದ ಪಕ್ಷದಲ್ಲಿ ಯುನಿಟ್ ಲಿಂಕ್ ಪಾಲಿಸಿಗಳಲ್ಲಿ ಕನಿಷ್ಠ ಜೀವವಿಮೆ ಈಗಿರುವ 10 ಪಟ್ಟಿಗಿಂತ 7 ಪಟ್ಟು ಆಗಲಿದೆ. ಇದು ಪಾಲಿಸಿದಾರ ನಿಧನವಾಗಿದ್ದಲ್ಲಿ ನೀಡುವ ಹಣವಾಗಿರುತ್ತದೆ.
5. ಯುನಿಟ್ ಲಿಂಕ್ಡ್ ಪಾಲಿಸಿಗಳಿಗಳಿದ್ದ ಕಡ್ಡಾಯ ಗ್ಯಾರೆಂಟಿಯು ಇನ್ನು ಐಚ್ಛಿಕವಾಗಲಿದೆ. ಇದು ಫೆ.1ರಿಂದ ಅನ್ವಯವಾಗಲಿದೆ. ಈ ಮೊದಲು ಐಆರ್ಡಿಎಐಯು ನಿವೃತ್ತಿ ಯುನಿಟ್ ಲಿಂಕ್ಡ್ ಪಾಲಿಸಿಗಳಲ್ಲಿ ಗ್ಯಾರೆಂಟಿಯನ್ನು ಕಡ್ಡಾಯವನ್ನಾಗಿ ಮಾಡಿತ್ತು. ಈಗ ಹೊಸ ಕ್ರಮದಿಂದಾಗಿ ಪಾಲಿಸಿದಾರರಿಗೆ ರಿಲೀಫ್ ಸಿಕ್ಕಿದ್ದು ಗ್ಯಾರೆಂಟಿಯನ್ನು ಆಯ್ಕೆ ಮಾಡಬಹುದು ಅಥವಾ ಮಾಡದೇ ಇರಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
MUST WATCH
ಹೊಸ ಸೇರ್ಪಡೆ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ