ಮಿರ್ಜಾಪುರ: ಶಾಲಾ ಮಕ್ಕಳ ಆಹಾರದಲ್ಲಿ ಹಲ್ಲಿ;90 ಮಂದಿ ಆಸ್ಪತ್ರೆಗೆ
Team Udayavani, Oct 14, 2017, 12:40 PM IST
ಮಿರ್ಜಾಪುರ : ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಉಣ ಬಡಿಸಲಾದ ಆಹಾರದಲ್ಲಿ ಹಲ್ಲಿಯ ತಲೆ ಪತ್ತೆಯಾಗಿದ್ದು, ಕನಿಷ್ಠ 90 ಮಂದಿ ವಿದ್ಯಾರ್ಥಿಗಳು ಈ ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ.
ವಿಷಾಹಾರ ಸೇವಿಸಿದೊಡನೆಯೇ ವಿದ್ಯಾರ್ಥಿಗಳಿಗೆ ವಾಂತಿ, ಹೊಟ್ಟೆ ನೋವು ಉಂಟಾಯಿತು. ಕೂಡಲೇ ಕನಿಷ್ಠ 90 ಮಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ವಿಂದ್ಯಾಚಲ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು ಎಂದು ಎಎನ್ಐ ವರದಿ ತಿಳಿಸಿದೆ.
ಅಸ್ವಸ್ಥರ ಪೈಕಿ 45 ವಿದ್ಯಾರ್ಥಿಗಳ ಆರೋಗ್ಯ ವಿಷಮಿಸಿದ್ದು ಅವರನ್ನು ಇನ್ನೊಂದು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಜೈ ಸಿಂಗ್ ಹೇಳಿದ್ದಾರೆ.
ಈ ಶಾಲೆಯು ವಿಂದ್ಯಾಚಲದ ಪರ್ಸಿಯಾ ಧುಂವಾ ಗ್ರಾಮದಲ್ಲಿದೆ. ಯಾವುದೇ ಜೀವ ಹಾನಿಯ ವರದಿಗಳು ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!