ಮಂಚದಡಿ ಬಾಂಬ್ ಇಟ್ಟು ಹತ್ಯೆ
Team Udayavani, Feb 14, 2018, 9:09 AM IST
ಹೈದರಾಬಾದ್: ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೊಲ್ಲಲು ಬಾಂಬ್ ಅಥವಾ ಸ್ಫೋಟಕಗಳನ್ನು ವಾಹನಗಳಲ್ಲಿಯೋ ಅಥವಾ ವೇದಿಕೆಯಲ್ಲಿಯೋ ಇಡಲಾಗುತ್ತದೆ. ಆದರೆ ಆಂಧ್ರಪ್ರದೇಶದ ನಲ್ಗೊಂಡಾ ಜಿಲ್ಲೆಯಲ್ಲಿ ಕಾಂಗ್ರೆಸ್ನ ಸ್ಥಳೀಯ ನಾಯಕನನ್ನು ಅವರು ಮಲಗುತ್ತಿದ್ದ ಮಂಚದ ಕೆಳಗೇ ಬಾಂಬ್ ಇರಿಸಿ ಹತ್ಯೆ ಮಾಡಲಾಗಿದೆ. ಜಿಲ್ಲೆಯ ಚಿಂತಾಲಪಾಲೆಂ ಗ್ರಾಮದಲ್ಲಿ ಉಪಾಧ್ಯಕ್ಷ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ಧರ್ಮ ನಾಯಕ್ ಈ ರೀತಿಯಾಗಿ ದುರ್ಮರಣಕ್ಕೀಡಾದ ವ್ಯಕ್ತಿ. ಸೋಮವಾರ ತಡರಾತ್ರಿ 2.30ಕ್ಕೆ ನಲ್ಗೊಂಡಾದ ಚಿಂತಾಲ ಪಾಲೆಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ ಇದು ರಾಜಕೀಯ ದ್ವೇಷದ ಕೃತ್ಯವಲ್ಲ. ಆತನ ಎರಡನೇ ಪತ್ನಿ ಸಿರೀಶಾ ಮೇಲೆ ಸಂಶಯ ವ್ಯಕ್ತವಾಗಿದೆ. ಮೃತನ ತಾಯಿ ನೀಡಿದ ದೂರಿನ ಆಧಾರದಲ್ಲಿ ಕೇಸು ದಾಖಲಿಸಲಾಗಿದ್ದು, ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮಂಚದ ಕೆಳಗೆ ಬಾಂಬ್ ಇರಿಸಲಾಗಿತ್ತು. ಸ್ಫೋಟದ ರಭಸಕ್ಕೆ ದೇಹ ಛಿದ್ರವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್