ಲೋಕಸಭಾ ಬೈ ಎಲೆಕ್ಷನ್:4 ಕ್ಷೇತ್ರಗಳಲ್ಲಿ 2 ರಲ್ಲಿ ಬಿಜೆಪಿಗೆ ಮುನ್ನಡೆ
Team Udayavani, May 31, 2018, 9:31 AM IST
ಮುಂಬಯಿ: ಮಹಾರಾಷ್ಟ್ರದ ಪಾಲ್ಘರ್,ಭಂಡಾರ-ಗೋಂಡಿಯಾ,ಉತ್ತರ ಪ್ರದೇಶದ ಕೈರಾನ ಮತ್ತು ನಾಗಾಲ್ಯಾಂಡ್ ಲೋಕಸಭಾ ಕ್ಷೇತ್ರಗಳಿಗೆನಡೆದ ಉಪಚುನಾವಣೆಯ ಮತಗಳ ಎಣಿಕೆ ಕಾರ್ಯ ಗುರುವಾರ ನಡೆಯುತ್ತಿದ್ದು, 2 ಕ್ಷೇತ್ರಗಳಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.
ಉತ್ತರ ಪ್ರದೇಶದ ಕೈರಾನ ದಲ್ಲಿ ಬಿಜೆಪಿ ಮೃಗಾಂಕಾ ಸಿಂಗ್ ಅವರು ಆರ್ಎಲ್ಡಿ ಅಭ್ಯರ್ಥಿ ತಬಾಸ್ಸುಮ್ ಹಸನ್ ಅವರ ವಿರುದ್ದ ಹಿನ್ನಡೆ ಸಾಧಿಸಿದ್ದು ಜಿದ್ದಾಜಿದ್ದಿನ ಸ್ಫರ್ಧೆ ಕಂಡು ಬಂದಿದೆ.
ಪಾಲ್ಘರ್ನಲ್ಲಿ ಬಿಜೆಪಿಯ ರಾಜೇಂದ್ರ ಗಾವಿತ್ ಅವರು ಶಿವಸೇನೆಯ ಶ್ರೀನಿವಾಸ್ ವನಗಾ ಅವರ ವಿರುದ್ಧ ಅಲ್ಪ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಪಾಲ್ಘರ್ನ ಹಾಲಿ ಬಿಜೆಪಿ ಸಂಸದ ಚಿಂತಾಮನ್ ವನಗಾ ಅವರ ಸಾವಿನಿಂದಾಗಿ ಈ
ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಚಿಂತಾಮನ್ ಪುತ್ರ ಶ್ರೀನಿವಾಸ್ ವನಗಾ ಬಿಜೆಪಿ ತೊರೆದು ಶಿವಸೇನೆ ಅಭ್ಯರ್ಥಿಯಾಗಿದ್ದಾರೆ.
ಭಂಡಾರ-ಗೋಂಡಿಯಾ ಕ್ಷೇತ್ರದ ಬಿಜೆಪಿ ಸಂಸದ ನಾನಾ ಪಟೋಲೆ ಅವರು ಪಕ್ಷಕ್ಕೆ ಹಾಗೂ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ.
ನಾನಾ ಪಟೋಲೆ ಅವರು 2017ರ ಡಿಸೆಂಬರ್ನಲ್ಲಿ ಪಕ್ಷವನ್ನು ತೊರೆದು ಕಾಂಗ್ರೆಸನ್ನು
ಸೇರಿರುವುದರಿಂದ ಭಂಡಾರ-ಗೋಂಡಿಯಾ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕೂಡ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ