ಫಡ್ನವೀಸ್ ಸರಕಾರದಿಂದ ರಾಜ್ಯದ ಆರ್ಥಿಕ ಶಿಸ್ತಿಗೆ ನಷ್ಟ: ಪವಾರ್
Team Udayavani, Dec 22, 2019, 6:50 PM IST
ಪುಣೆ: ದೇವೇಂದ್ರ ಫಡ್ನವೀಸ್ ಅವರ ಸರಕಾರವು 2017-18ರ ಸಾಲಿನಲ್ಲಿ ವಿವಿಧ ಕೆಲಸಕ್ಕಾಗಿ ಬಳಿಸಿದ 65ಸಾವಿರ ಕೋಟಿ ರೂ. ಗಳ ಲೆಕ್ಕಾಚಾರ ದೊರೆಯಲಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಇಂತಹ ಆರೋಪಗಳನ್ನು ಮಾಡಿದೆ.
ಆದ್ದರಿಂದ, ರಾಜ್ಯದ ಆರ್ಥಿಕ ಶಿಸ್ತನ್ನು ನಷ್ಟಮಾಡುವ ಕಾರ್ಯವು ಫಡ್ನವೀಸ್ ಅವರ ಸರಕಾರದ ಅವಧಿಯಲ್ಲಿ ನಡೆದಿದೆ ಎಂದು ಎನ್ಸಿ ಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಪುಣೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಈ ಬಗ್ಗೆ ತನಿಖೆ ನಡೆಸಲು ಮತ್ತು ಸತ್ಯವನ್ನು ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸಲು ಪ್ರಸ್ತುತ ಸರಕಾರ ತಜ್ಞರ ಸಮಿತಿಯನ್ನು ನೇಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಫಡ್ನವಿಸ್ ಸರಕಾರ 2017-18ರ ಹಣಕಾಸು ವರ್ಷದಲ್ಲಿ ಸುಮಾರು 65,000 ಕೋಟಿ ರೂ. ದುರುಪಯೋಗಪಡಿಸಿದ ಬಗ್ಗೆ ಕಂಟ್ರೋಲ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮಾಹಿತಿ ನೀಡಿದೆ. 2018ರ ಮಾರ್ಚ್ 31ರಂದು 65,921 ಕೋಟಿ ರೂ. ಗಳ ಉಪಯೋಗದ ಪ್ರಮಾಣಪತ್ರ ಸಲ್ಲಿಸಲಿಲ್ಲ. ಆದ್ದರಿಂದ ನಿಧಿಯ ದುರುಪಯೋಗ ಮಾಡಿದ ಅಥವಾ ಅಕ್ರಮ ವ್ಯವಹಾರದ ಅಪಾಯವಿದೆ ಎಂದು ಸಿಎಜಿ ವರದಿ ಮಾಡಿದೆ.
ಈ ದಾಖಲೆಗಳನ್ನು ಪಡೆಯುವ ಮೂಲಕ ಶರದ್ ಪವಾರ್ ಅವರು, ಫಡ್ನವೀಸ್ ಅವರನ್ನು ಗುರಿಯಾಗಿಸಿಕೊಂಡರು. ಆರ್ಥಿಕ ಶಿಸ್ತು ರಾಜ್ಯದ ಒಂದು ಲಕ್ಷಣವಾಗಿತ್ತು. ಆದರೆ ಫಡ್ನವೀಸ್ ಆಳ್ವಿಕೆಯಲ್ಲಿ ಅದು ನಾಶವಾಗಿದೆ. ಸಮಗ್ರ ತನಿಖೆಗೆ ಸರಕಾರವನ್ನು ಒತ್ತಾಯಿಸುತ್ತಿದೆ ಎಂದರು.
ರೈತರ ಸಾಲಮನ್ನಾ ವಿಷಯದ ಬಗ್ಗೆ ಪ್ರತಿಭಟನಾಕಾರರ ಟೀಕೆಗೆ ಪವಾರ್ ಪ್ರತಿಕ್ರಿಯಿಸಿದರು. ಐದು ವರ್ಷಗಳ ಕಾಲ ಸರಕಾರವನ್ನು ನಡೆಸುವವರು ಅಂತಹ ನಿರ್ಧಾರಗಳು ತಕ್ಷಣತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದ ಶರದ್ ಪವಾರ್ ಅವರು, ಸರಕಾರ ಈ ನಿಟ್ಟಿನಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಂಡಿದೆ ಎಂದರು. ವಿಧಾನಸಭೆಯ ಅಧಿವೇಶನದ ನಂತರ,ಮಹಾವಿಕಾಸ್ ಆಘಾಡಿಯ ಸರಕಾರದ ಕ್ಯಾಬಿನೆಟ್ ವಿಸ್ತರಿಸಲಿದೆ. ಧನಗಾರ ಮೀಸಲಾತಿ ಕುರಿತು ಕೇಂದ್ರ ಸರಕಾರದ ಪಾತ್ರ ಅನುಕೂಲಕರವಾಗಿಲ್ಲ ಎಂದರು.
ಮಹಾ ವಿಕಾಸ್ ಆಘಾಡಿಯು ಮತದಾರರನ್ನು ಮೋಸಗೊಳಿಸುತ್ತಿದೆ ಮತ್ತು ಈ ಸರಕಾರವು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದರು. ಈ ಸರಕಾರ ಬಂದು ಹದಿನೈದು ದಿನಗಳು ಆಗಲಿಲ್ಲ ಆವಾಗಲೇ ರಾಜ್ ಠಾಕ್ರೆ ತೀರ್ಮಾನಿಸಿದರು. ನನಗೆ ರಾಜ್ಠಾಕ್ರೆ ಅವರ ಬಗ್ಗೆ ಹೆಮ್ಮೆ ಏನಿಸುತ್ತದೆ ಎಂದು ಹೇಳಿದ ಶರದ್ ಪವಾರ್ ಅವರು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಅವರಿಗೆ ಕ್ಲೀನ್ ಚಿಟ್ ದೊರೆತ ನಂತರ, ಕೆಲವರೂ, ನನಗೂ ಮತ್ತು ದಾವೂದ್ ಜತೆ ಸ್ನೇಹವಿರುವ ಆರೋಪ ಹೊರಿಸಿದ್ದರು. ಇಂತಹ ಆರೋಪಗಳು ಅಗಾಧವಾಗಿದ್ದು ಏನೂ ಸಾಬೀತಾಗಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಅಜಿತ್ ಪವಾರ್ ಅವರು ‘ಕ್ಲೀನ್ ಚಿಟ್’ ಪಡೆದರು ಎಂದು ಶರದ್ ಪವಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!