ಲವ್ವಾದ್ರೆ ಒಪ್ಪಿಯೇ ವಿವಾಹ
Team Udayavani, Feb 14, 2019, 12:30 AM IST
ಸೂರತ್: ಪ್ರತಿ ವರ್ಷದ ಫೆ. 14 ಎಂದರೆ ವಿಶ್ವ ಪ್ರೇಮಿಗಳ ದಿನ. ಅದರಲ್ಲೇನು ವಿಶೇಷ ಎಂದು ಕೇಳಬೇಡಿ. ಗುಜರಾತ್ನ ಸೂರತ್ನಲ್ಲಿರುವ 12ನೇ ತರಗತಿಯ10 ಸಾವಿರ ಮಂದಿ ವಿದ್ಯಾರ್ಥಿಗಳು ಗುರುವಾರ ವಿಶೇಷ ಪ್ರತಿಜ್ಞೆ ಮಾಡಲಿದ್ದಾರೆ. “ಒಂದು ವೇಳೆ ಅವರಿಗೆ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾದರೂ ಹೆತ್ತವರ ಒಪ್ಪಿಗೆ ಇಲ್ಲದೆ ಮದುವೆಯಾಗುವುದಿಲ್ಲ’ ಹೀಗೆಂದು ಅವರ ಪ್ರತಿಜ್ಞೆ ಇರಲಿದೆ. “ಹಾಸ್ಯಮೇವ ಜಯತೇ’ ಎಂಬ ಸಂಘಟನೆ 12 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ನಗೆ ತಜ್ಞ ಕಮಲೇಶ್ ಮಸಾಲ್ವಾಲಾ ಈ ಸಂಘಟನೆಯ ನೇತೃತ್ವ ವಹಿಸಿದ್ದಾರೆ. ಕಾರ್ಯಕ್ರಮ ಬಗ್ಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರು ಏಕಾಏಕಿ ಪ್ರೇಮ ವಿವಾಹದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.ಮದುವೆಯಲ್ಲಿ ಹೆತ್ತವರ ಪ್ರಾಮುಖ್ಯದ ಬಗ್ಗೆ ಅರಿವು ಮೂಡಿಸುವುದೇ ಇದರ ಉದ್ದೇಶ ಎಂದು ಹೇಳಿದ್ದಾರೆ.
ಮೋದಿ ಫಾಲೋವರ್ಸ್ ಅನುರಾಗ, ವಿವಾಹ
ಪ್ರಧಾನಿ ಮೋದಿ ಟ್ವಿಟರ್ ಅಭಿಮಾನಿಗಳು ದಾಂಪತ್ಯ ಜೀವನ ಪ್ರವೇಶ ಮಾಡಿದ್ದಾರೆ. ಶ್ರೀಲಂಕಾ ಮೂಲದ ಗೋವಿಂದ್ ಮಹೇಶ್ವರಿ (26) ಹಾಗೂ ಪಂಜಾಬ್ನ ಕುಚೊಡ್ ಗ್ರಾಮದ ಹಂಸಿನಿ ಸಿಂಘೆ (25) ಪ್ರಧಾನಿ ಟ್ವಿಟರ್ನಿಂದ ಒಂದಾಗಿರುವ ಜೋಡಿ. ಗೋವಿಂದ್ರ ಟ್ವೀಟ್ನ್ನು ಮೋದಿ ಲೈಕ್ ಮಾಡಿದ್ದು ಅನುರಾಗ ಮೂಡಲು ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ