Madhya Pradesh ಆಕ್ಷೇಪಾರ್ಹ ವೆಬ್ ಸೀರೀಸ್ ನಿಷೇಧ: ಸಿಎಂ ಶಿವರಾಜ್ ಸಿಂಗ್ ಎಚ್ಚರಿಕೆ
Team Udayavani, Apr 9, 2023, 9:38 PM IST
ಭೋಪಾಲ್: ರಾಜ್ಯದಲ್ಲಿ ಯಾವುದೇ “ಆಕ್ಷೇಪಾರ್ಹ ವೆಬ್ ಸರಣಿ” ಗಳ ಮೇಲೆ ಸರ್ಕಾರ ನಿಷೇಧ ಹೇರಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ.
ಭೋಪಾಲ್ನ ದಸರಾ ಮೈದಾನದಲ್ಲಿ ಧಾರ್ಮಿಕ ಬೋಧಕ ದೇವಕಿನಂದನ್ ಠಾಕೂರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಚೌಹಾಣ್, ಎಲ್ಲ ಆಕ್ಷೇಪಾರ್ಹ ವೆಬ್ ಸೀರೀಸ್ ಗಳನ್ನು ನಿಷೇಧಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ ನಂತರ, ಈ ರೀತಿಯ ವಿಷಯಗಳು ಯುವ ಪೀಳಿಗೆಯನ್ನು ಅವರ ಸಂಸ್ಕೃತಿಯಿಂದ ದೂರವಿಡುತ್ತಿವೆ. ಭೋಪಾಲ್ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವದ ಭೂಮಿಯಾಗಿದೆ ಎಂದರು.
ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದಂತೆ, “ರಾಜ್ಯ ಸರ್ಕಾರವು ಈ ದಿಕ್ಕಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಧಾರ್ಮಿಕ ಬೋಧಕ ದೇವಕಿನಂದನ್ ಠಾಕೂರ್ ಅವರು OTT ಪ್ಲಾಟ್ಫಾರ್ಮ್ಗಳಲ್ಲಿ ಪ್ರದರ್ಶನಗಳು ಮತ್ತು ವೆಬ್ ಸರಣಿಗಳ ಬಗ್ಗೆ ತೀವ್ರ ವಿಮರ್ಶಕರಾಗಿದ್ದಾರೆ ಏಕೆಂದರೆ ಅಲ್ಲಿ ಲಭ್ಯವಿರುವ ವಿಷಯವು ಜನರ ಸಾಮಾಜಿಕ ಸಂಬಂಧಗಳ ಮೇಲೆ ಪ್ರತಿಕೂಲ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..