ಫೈರಿಂಗ್ ರೇಂಜ್ನಲ್ಲಿದ್ದ ಬಾಂಬ್ ಎತ್ತಿಕೊಂಡ ಇಬ್ಬರು ಅಛಾನಕ್ ಸ್ಫೋಟಕ್ಕೆ ಬಲಿ
Team Udayavani, Jul 10, 2019, 12:24 PM IST
ಅಹ್ಮದ್ನಗರ : ಗುಜರಿ ಅಂಗಡಿಗೆ ಮಾರಲು ಫೈರಿಂಗ್ ರೇಂಜ್ ನಿಂದ ಸಂಗ್ರಹಿಸಿ ತಂದಿದ್ದ ಸಜೀವ ಬಾಂಬ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಲ್ಲಿ ಇಂದು ಬುಧವಾರ ನಸುಕಿನ ವೇಳೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿನ ಖಾರೆ ಕರ್ಜೂನೆ ಎಂಬ ಗ್ರಾಮದಲ್ಲಿ ಇಂದು ಬುಧವಾರ ನಸುಕಿನ ಬುಧವಾರ ನಸುಕಿನ 4 ಗಂಟೆಯ ವೇಳೆಗೆ ಈ ಘಟನೆ ನಡೆಯಿತು ಎಂದು ಎಸ್ಐ ಪಿ ಎಸ್ ದಾತಾಳೆ ತಿಳಿಸಿದ್ದಾರೆ.
ಸೇನೆಯ ಫೈರಿಂಗ್ ರೇಂಜ್ಗೆ ಹೋಗಿದ್ದ ಅಕ್ಷಯ್ ನವನಾಥ್ ಗಾಯಕ್ವಾಡ್ (19) ಮತ್ತು ಸಂದೀಪ್ ಭಾವು ಸಾಹೇಬ್ ತಿರೋಡೆ (34) ಅವರು ಗುಜರಿ ಅಂಗಡಿಗೆ ಮಾರುವ ಸಲುವಾಗಿ ಅಲ್ಲಿ ಬಿದ್ದುಕೊಂಡಿದ್ದ ಸಜೀವ ಬಾಂಬ್ ಸಂಗ್ರಹಿಸಿದರು. ಇದರಿಂದ ಲೋಹವನ್ನು ಬೇರ್ಪಡಿಸುವ ವೇಳೆ ಅದು ಸ್ಫೋಟಗೊಂಡಾಗ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟರು ಎಂದು ಅಧಿಕಾರಿ ತಿಳಿಸಿದರು.
ಬಾಂಬ್ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮೃತ ವ್ಯಕ್ತಿಗಳ ದೇಹ ಚೂರು ಚೂರಾಗಿ ಹರಡಿಕೊಂಡ ಬಿದ್ದಿತ್ತು ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ