ಹಸಿರಾಯಿತು ಬರಡು ಭೂಮಿ! 30 ಸಾವಿರ ಗಿಡ ಬೆಳೆಸಿದ ನಿಸರ್ಗ ಪ್ರೇಮಿಗಳು
ಬರಗಾಲಪೀಡಿತ ಲಾತೂರ್ನಲ್ಲಿ ಬೆಳೆದು ನಿಂತಿತು ಅರಣ್ಯ
Team Udayavani, Nov 3, 2021, 9:45 PM IST
ಮುಂಬೈ: ಮಾಲಿನ್ಯ ಕಡಿಮೆಯಾಗಬೇಕೆಂದರೆ, ಗಿಡಗಳನ್ನು ನೆಡಬೇಕೆನ್ನುವ ಮಾತನ್ನು ಎಲ್ಲರೂ ಹೇಳುತ್ತಾರಾದರೂ ಕಾರ್ಯರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ. ಅದೇ ರೀತಿ ಮಹಾರಾಷ್ಟ್ರದಲ್ಲಿ ಬರಡು ಭೂಮಿಯಾಗಿದ್ದ ಬೆಟ್ಟವೊಂದನ್ನು ಒಂದಿಷ್ಟು ಜನರು ಸೇರಿಕೊಂಡು ಹಚ್ಚ ಹಸಿರಿನ ಕಾಡಾಗಿಸಿದ್ದಾರೆ.
ಲಾತೂರ್ ಜಿಲ್ಲೆಯ ರಾಮ್ವಾಡಿ ಗ್ರಾಮದಲ್ಲಿ 61 ಎಕರೆ ಜಾಗದಲ್ಲಿದ್ದ ಬೆಟ್ಟವೊಂದು ಬರಡಾಗಿತ್ತು. ಅದನ್ನು ಕಂಡು ಬೇಸರಗೊಂಡ ನಟ ಸಯಾಜಿ ಶಿಂಧೆ “ಸಹ್ಯಾದ್ರಿ ದೇವ್ರಾಯ್’ ಹೆಸರಿನ ಎನ್ಜಿಒ ಸ್ಥಾಪಿಸಿ, ಅದರ ಮೂಲಕ ಆ ಪ್ರದೇಶದಲ್ಲಿ ಗಿಡ ನೆಡಲಾರಂಭಿಸಿದರು. 2018ರಿಂದ ಈವರೆಗೆ ಅಲ್ಲಿ 35 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಪ್ರಸ್ತುತ 30 ಸಾವಿರ ಗಿಡಗಳು ಬೆಳೆದು ದೊಡ್ಡ ಮರಗಳಂತಾಗಿವೆ ಎನ್ನಲಾಗಿದೆ.
ಗಿಡಗಳಿಗೆ ನೀರು ಪೂರೈಸುವ ಹಿನ್ನೆಲೆಯಲ್ಲಿ ಬೆಟ್ಟದ ಹಲವೆಡೆ “ಪಾನಿ ಆದ್ವಾ, ಪಾನಿ ಜಿರ್ವಾ’ ಎನ್ನುವ ಸಿಸ್ಟಂ ಮೂಲಕ ಇಂಗುಗುಂಡಿಗಳನ್ನು ರಚಿಸಲಾಗಿದೆ. ಭಾರತೀಯ ತಳಿಗಳಾದ ಆಲ, ಬೇವು ಸೇರಿ ಒಟ್ಟು 60 ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.
ಇದನ್ನೂ ಓದಿ:ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ: ಸಚಿವ ನಾಗೇಶ್
ಶಿಂಧೆ ಸ್ಫೂರ್ತಿ:
ಸಯಾಜಿ ಶಿಂಧೆ ಅವರು 2018ರಲ್ಲಿ ಲಾತೂರ್ನ 400 ವರ್ಷಗಳಷ್ಟು ಹಳೆಯ ಆಲದ ಮರ ನೋಡಲೆಂದು ಆಗಮಿಸಿದ್ದರು. ಆ ಮರದ ಕೆಳಗೇ ವರ್ಕ್ಶಾಪ್ ಒಂದನ್ನು ಮಾಡಿದ್ದರು. ಅದಾದ ನಂತರ ಜನರು ಹೆಚ್ಚಾಗಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗಿ ಸಹ್ಯಾದ್ರಿ ದೇವ್ರಾಯ್ ಎನ್ಜಿಒ ಜಿಲ್ಲಾ ಸಂಯೋಜಕರಾಗಿರುವ ಸುಪಣ್ì ಜಗ³ತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು