ಮಹದಾಯಿ:ನ್ಯಾಯಾಂಗ ನಿಂದನೆ ಅರ್ಜಿ ಹಿಂತೆಗೆದ ಗೋವಾ!
Team Udayavani, Feb 13, 2018, 11:48 AM IST
ಹೊಸದಿಲ್ಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಗೋವಾ ಸರ್ಕಾರ ಕರ್ನಾಟಕದ ವಿರುದ್ದ ನ್ಯಾಯಾಧೀಕರಣಕ್ಕೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಾಪಾಸ್ ಪಡೆದಿದೆ.
ಗೋವಾ ಸರಕಾರದ ತಕರಾರು ಅರ್ಜಿ ವಿರುದ್ಧ ಆಕ್ಷೇಪ ಸಲ್ಲಿಸಿದ್ದ ಕರ್ನಾಟಕ ನದಿ ನೀರನ್ನು ತಿರುವು ಮಾಡಲಿಲ್ಲ.ಜೊತೆಗೆ ನ್ಯಾಯಾಧೀಕರಣಕ್ಕೆ ಅರ್ಜಿ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿತ್ತು. ಇಂದು ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಗೋವಾ ವಕೀಲರು ಅರ್ಜಿಯನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.
ನ್ಯಾಯಾಧೀಕರಣ ಅರ್ಜಿ ಹಿಂಪಡೆಯಲೆ ಅವಕಾಶವನ್ನು ನೀಡಿತ್ತು.