ಮಹಾಮೈತ್ರಿ ದೇಶದ ಹಿತಕ್ಕಾಗಿ ಅಲ್ಲ: ಶಿವಸೇನೆ
ವಿಪಕ್ಷಗಳ ನಡೆಗೆ ಕೇಸರಿ ಪಕ್ಷ ಶಿವಸೇನೆ ಟೀಕೆ
Team Udayavani, May 22, 2019, 2:55 PM IST
ಮುಂಬಯಿ:ಎಕ್ಸಿಟ್ ಪೋಲ್ ಸಮೀಕ್ಷೆಗೆ ಬಂದ ಅನಂತರ, ಅನೇಕ ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಸಮ್ಮಿಶ್ರವಾದ ಮಹಾಮೈತ್ರಿಯು ದೇಶದ ಹಿತದ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಶಿವಸೇನೆ ಹೇಳಿದೆ.
ಈ ಚುನಾವಣೆಯ ಫಲಿತಾಂ ಶದ ಅನಂತರ ಈ ಮಹಾಮೈತ್ರಿಗೆ ವಿಪಕ್ಷದಲ್ಲಿ ಕುಳಿತುಕೊಳ್ಳುವ ಹೊರತು ಬೇರೆ ಯಾವುದೇ ಸ್ಥಳಾವಕಾಶ ಉಳಿದಿಲ್ಲ. ರವಿವಾರ ಲೋಕಸಭೆ ಚುನಾವಣೆ ಮುಕ್ತಾ ಯಗೊಂಡಿದ್ದು, ಮೇ 23ರ ಗುರುವಾರ ಮತ ಏಣಿಕೆ ನಡೆಯಲಿದೆ. ಚುನಾವಣೆ ಮುಕ್ತಾಯಗೊಳ್ಳುತ್ತಲೆ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಟಿಸಿದೆ. ಇದರಲ್ಲಿ ಎನ್ಡಿಎಗೆ ಪೂರ್ಣ ಬಹುಮತದ ಸರಕಾರ ನಿರ್ಮಾಣ ಮಾಡಲಿದೆ ಎಂದು ಹೇಳಿದೆ.
ಶಿವಸೇನೆ ಪ್ರಕಾರ, ವಿಪಕ್ಷಗಳು ಎಕ್ಸಿಟ್ ಪೋಲ್ ಫಲಿತಾಂಶದ ಮಾದರಿ ಚುನಾವಣ ಫಲಿತಾಂಶವು ಬರಬಾರದು ಎಂದು ಅನಿಸುತ್ತಿದ್ದು, ಭಯ ಆರಂಭವಾಗಿದೆ ಎಕ್ಸಿಟ್ ಪೋಲ್ಗಳು ಬರೀ ಹೇಳಿಕೆಯಾಗಿ ಉಳಿಯಲಿ ಎಂದು ವಿಪಕ್ಷಗಳಿಗೆ ಅನಿಸುತ್ತದೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕರಲ್ಲದೆ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿಗೆ ಭೇಟಿ ನೀಡಿದ್ದಾರೆ. ಚುನಾವಣ ಫಲಿತಾಂಶದ ನಂತರ ಮೇ 23ರಂದು “ಸಂಭವನೀಯ ಮೈತ್ರಿ’ ಉಳಿದು ಕೊಂಡಿಲ್ಲ ಎಂಬ ಭರವಸೆ ಆಗಿದ್ದರಿಂದ ನಾಯ್ಡು ಇಲ್ಲಿಂದ ಅಲ್ಲಿಗೆ ಓಡುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.
ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶದ ವೈಎಸ್ಆರ್ ಕಾಂ ಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಆಂಧ್ರ ಪ್ರದೇಶದ ನೆರೆಯ ರಾಜ್ಯ ತೆಲಂ ಗಾಣದಲ್ಲಿ ಕೆ. ಚಂದ್ರಬಾಬು ರಾವ್ ನೇತೃತ್ವದ ಟಿಆರ್ಎಸ್, ನಾಯ್ಡು ಅವರ ಟಿಡಿಪಿ ವಿರುದ್ಧ ಬಹುಮತದ ಗೆಲುವು ಸಾಧಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ ವಿಪಕ್ಷ ಒಕ್ಕೂಟವು ಒಳಗಿಂದ ಒಳಗೆ ತುಂಡಾಗುತ್ತಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ, ವಿಪಕ್ಷಗಳ ಮಹಾ ಮೈತ್ರಿಯಲ್ಲಿ ಪ್ರಧಾನಮಂತ್ರಿ ಹು¨ªೆಗೆ 5 ಅಭ್ಯರ್ಥಿಗಳಿಗಿಂತ ಕಡಿಮೆಯಿಲ್ಲ ಎಂದು ಹೇಳಿದೆ. ಎಕ್ಸಿಟ್ ಪೋಲ್ ಸಮೀಕ್ಷೆಯ ಬಳಿಕ, ಪ್ರಧಾನಿಯಾ ಗುವ ನಿರೀಕ್ಷೆಯಲ್ಲಿದ್ದವರ ಕನಸು ಭಗ್ನವಾಗಿದೆ.
ಫಲಿತಾಂಶಗಳನ್ನು ಪ್ರಕಟಿಸಿದ ಅನಂತರ, ದೆಹಲಿಯಲ್ಲಿ (ಕೇಂದ್ರ) ಸ್ಥಿತಿಯು ಅಸ್ಥಿರವಾಗಲಿದೆ ಮತ್ತು ಅದರಿಂದ ಅವರು ಇದರ ಲಾಭವನ್ನು ಗಳಿಸಬೇಕೆಂದು ಭಾವಿಸುತ್ತಾರೆ ಎಂದು ಶಿವಸೇನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ