ರೈತನೊಬ್ಬ ಈಗ “ಹೆಲಿಕಾಪ್ಟರ್ ಮಾಲಿಕ…!”
ಡೈರಿ ವ್ಯವಹಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ರೈತ ಜನಾರ್ದನ್ ..!
Team Udayavani, Feb 16, 2021, 1:26 PM IST
ಮಹಾರಾಷ್ಟ್ರ: ನೀವು ಸಾಮನ್ಯವಾಗಿ ಒಬ್ಬ ರೈತ ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ವಿಚಾರವನ್ನು ಕೇಳಿರುತ್ತೀರಿ. ಅದು ನಿಮಗೆ ವಿಶೇಷ ಎಂದೇನನ್ನಿಸುವುದಿಲ್ಲ. ಆದರೇ, ಇಲ್ಲೊಬ್ಬ ರೈತ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ.
ಹೌದು, ಇಡೀ ವಿಶ್ವವೇ ತನ್ನತ್ತ ಗಮನೆ ಸೆಳೆಯುವ ಹಾಗೆ ಮಾಡಿದ ರೈತ ಯಾರು ಏನು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ. ನಾವು ನಿಮಗೆ ತಿಳಿಸುತ್ತಿರುವ ರೈತ ಸಾಮಾನ್ಯ ರೈತನಲ್ಲ. ಈ ರೈತ ಒಬ್ಬ ಹೆಲಿಕಾಪ್ಟರ್ ಮಾಲಿಕ, ಅಂತಂದರೇ ನೀವು ನಂಬಲೇಬೇಕು.
ಓದಿ : ಅಮೇರಿಕಾಕ್ಕೆ ಕಳಂಕವಾಗಿರುವ ಬೃಹತ್ ಕಾರಾಗೃಹ “ಗ್ವಾಂಟನಾಮೊ ಬೇ” ಶಾಶ್ವತ್ ಬಂದ್ …!?
ಮಹಾರಾಷ್ಟ್ರದ ಭಿವಾಂಡಿಯ ರೈತ ಜನಾರ್ಧನ್ ಭೋಯಿರ್ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡ ಅಸಾಮಾನ್ಯರೆನ್ನಿಸಿಕೊಂಡ ರೈತ. ರೈತನೊಬ್ಬ ಹೆಲಿಕಾಪ್ಟರ್ ಮಾಲೀಕ ಎಂದರೆ ನಂಬಲಸಾಧ್ಯ. ಆದರೆ ಇದು ಅಪ್ಪಟ ಸತ್ಯ.
ಜನಾರ್ದನ್ ತನ್ನ ಹಾಲು ಮತ್ತು ಅದರ ಉತ್ಪನ್ನಕ್ಕೆ ಸಂಬಂಧಿಸಿದ ವ್ಯವಹಾರಕ್ಕಾಗಿ ಅನೇಕ ಭಾರಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸುತ್ತಿರುತ್ತಾರೆ. ಈ ಕಾರಣದಿಂದ ತನ್ನ ಪ್ರಯಾಣ ಸುಗಮವಾಗಿ ನಡೆಯಲಿ ಎಂಬ ಉದ್ದೇಶದಿಂದ ಜನಾರ್ಧನ್ ಹೆಲಿಕಾಪ್ಟರ್ ಖರೀದಿಸಿದ್ದಾರೆ.
ಡೈರಿ ವ್ಯವಹಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ರೈತ ಜನಾರ್ದನ್ ..!
ಕೃಷಿ ಮತ್ತು ಹಾಲು ವ್ಯಾಪಾರ ಮಾಡುವ ರೈತ ಜನಾರ್ದನ್ ಭೋಯಿರ್ ಡೈರಿ ವ್ಯವಹಾರಕ್ಕಾಗಿ ಆಗಾಗ್ಗೆ ಪಂಜಾಬ್ , ಗುಜರಾತ್, ಹರಿಯಾಣ, ರಾಜಸ್ಥಾನದಂತಹ ಪ್ರದೇಶಗಳಿಗೆ ಪ್ರಯಣ ಬೆಳೆಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ತನ್ನ ಪ್ರಯಾಣ ಸುಗಮವಾಗಿರಲಿ ಎಂಬ ಕಾರಣದಿಂದಾಗಿ, 30 ಕೋಟಿ ಮೌಲ್ಯದ ಹೆಲಿಕಾಪ್ಟರ್ ಖರೀದಿಸಿದ್ದಾರೆ.
ಮಾರ್ಚ್ 15 ರಂದು ತಲುಪಲಿರುವ ಹೆಲಿಕ್ಯಾಪ್ಟರ್ !
ಜನಾರ್ದನ್ ಭೋಯಿರ್ ಅವರು ತಮ್ಮ ಮನೆಯ ಸಮೀಪ ಹೆಲಿಪ್ಯಾಡ್ ನಿರ್ಮಿಸಿದ್ದಾರೆ. ಇದಲ್ಲದೆ, ತನ್ನ 2.5 ಎಕರೆ ಜಾಗದಲ್ಲಿ ಪೈಲಟ್ ರೂಮ್ , ಟೆಕ್ನಿಷಿಯನ್ ರೂಮ್ ಸಹ ಸಿದ್ಧಪಡಿಸಲಾಗಿದೆ. ಮಾರ್ಚ್ 15 ರಂದು ಜನಾರ್ಧನ್ ಅವರಿಗೆ ಹೆಲಿಕಾಪ್ಟರ್ ಸಿಗಲಿದೆ.
ಜನಾರ್ಧನ್ ಗೆ ಇದು ಹೇಗೆ ಸಾಧ್ಯವಾಯಿತು..?
ಜನಾರ್ದನ್ ಭೋಯಿರ್ ಕೃಷಿಯ ಹೊರತಾಗಿ, ರಿಯಲ್ ಎಸ್ಟೇಟ್ ನಡೆಸುತ್ತಾರೆ. ಜನಾರ್ದನ್ ಭೋಯಿರ್ ಸಹ ಅನೇಕ ಗೋದಾಮುಗಳನ್ನು ಹೊಂದಿದ್ದು, ಇದರಿಂದ ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ಸಂಪಾದಿಸುತ್ತಾರೆ ಜನಾರ್ಧನ್.
ಓದಿ : ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ಭಾಗದ ರೈತರ ಹೊಸ ಪ್ರಯೋಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!