ವಿಡಿಯೋ: ಚಾಲಕನ ಅಶ್ಲೀಲ ಪ್ರಶ್ನೆಗೆ ಹೆದರಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಬಾಲಕಿ ಗಂಭೀರ
Team Udayavani, Nov 17, 2022, 11:48 AM IST
ಔರಂಗಾಬಾದ್ : ರಿಕ್ಷಾ ಚಾಲಕನ ಅಶ್ಲೀಲ ಪ್ರಶ್ನೆಗಳಿಗೆ ಹೆದರಿದ ಬಾಲಕಿಯೊಬ್ಬಳು ಚಾಲಕನಿಂದ ರಕ್ಷಣೆ ಪಡೆಯಲು ಚಲಿಸಿಯುತ್ತಿದ್ದ ರಿಕ್ಷಾದಿಂದ ರಸ್ತೆಗೆ ಜಿಗಿದು ತಲೆಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯು ಔರಂಗಾಬಾದ್ ನಗರದ ಸಿಲ್ಲೇಖಾನದಿಂದ ಶಿವಾಜಿ ಹೈಸ್ಕೂಲ್ ರಸ್ತೆಯ ಸಂಕಲ್ಪ್ ಕ್ಲಾಸ್ ಎದುರು ನಡೆದಿದೆ. ಬಾಲಕಿ ರಿಕ್ಷಾದಿಂದ ಹೊರ ಜಿಗಿಯುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆದ ಬಳಿಕ ರಿಕ್ಷಾ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಿಕ್ಷಾ ಚಾಲಕನನ್ನು ಪತ್ತೆ ಹಚ್ಚಿದ್ದಾರೆ.
ಬಂಧಿತ ರಿಕ್ಷಾ ಚಾಲಕನನ್ನು 39 ವರ್ಷದ ಸೈಯದ್ ಅಕ್ಬರ್ ಸೈಯದ್ ಹಮೀದ್ ಎಂದು ಗುರುತಿಸಲಾಗಿದೆ.
ಔರಂಗಾಬಾದ್ ಕ್ರಾಂತಿ ಚೌಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಾ.ಗಣಪತ್ ದಾರಾಡೆ ನೀಡಿದ ಮಾಹಿತಿಯ ಪ್ರಕಾರ, ಖೋಕಡ್ಪುರ ಪ್ರದೇಶದ 17 ವರ್ಷದ ಬಾಲಕಿ ಗೋಪಾಲ್ ಟೀ ಸೆಕ್ಟರ್ನಲ್ಲಿ ಟ್ಯೂಷನ್ ಪಡೆಯುತ್ತಿದ್ದು ದಿನಂಪ್ರತಿ ಆಟೋದಲ್ಲಿ ಹೋಗಿಬರುತ್ತಿದ್ದಳು.
ಇದನ್ನೂ ಓದಿ : ಕೆಎಸ್ಆರ್ಟಿಸಿ ಬಸ್ ನಿಲ್ದಾಣ; ಪ್ರಾಣಸಂಕಟ ತರುತ್ತಿರುವ ಹಂಪ್ಸ್ ಗಳು
ನವೆಂಬರ್ 13 ರಂದು ಮಧ್ಯಾಹ್ನ 12 ಗಂಟೆಗೆ ತರಗತಿ ಮುಗಿದ ನಂತರ ವಾಪಸು ರಿಕ್ಷಾದಲ್ಲಿ ಬರಲು ರಿಕ್ಷಾ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ರಿಕ್ಷಾವನ್ನು ಹತ್ತಿದ್ದಾಳೆ, ಸಂತ್ರಸ್ತ ವಿದ್ಯಾರ್ಥಿನಿ ರಿಕ್ಷಾದಲ್ಲಿ ಒಬ್ಬಳೇ ಕುಳಿತಿದ್ದನ್ನು ನೋಡಿದ ರಿಕ್ಷಾ ಚಾಲಕ ಅಕ್ಬರ್ ಸೈಯದ್ ಮೊದಲು ಆಕೆಯ ಹೆಸರನ್ನು ಕೇಳಿದ್ದಾನೆ. ಆದರೆ ಹುಡುಗಿ ಅವನಿಗೆ ಯಾವುದೇ ಉತ್ತರ ನೀಡಲಿಲ್ಲ. ಆಗ ಚಾಲಕ ಅಶ್ಲೀಲ ಪ್ರಶ್ನೆಗಳನ್ನು ಕೇಳಲು ಮತ್ತು ಅಸಭ್ಯವಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ. ಇದರಿಂದ ಹೆದರಿದ ಬಾಲಕಿ ರಿಕ್ಷಾದಿಂದ ಜಿಗಿದಿದ್ದಾಳೆ. ಈ ವೇಳೆ ಆಕೆಯ ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ಬಾಲಕಿ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಔರಂಗಾಬಾದ್ನ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ರಾಂತಿ ಚೌಕ್ ಪೊಲೀಸರು ರಾತ್ರೋರಾತ್ರಿ 40 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ರಿಕ್ಷಾವನ್ನು ಪತ್ತೆಹಚ್ಚಲು ವಿಶೇಷ ತಂಡ ನಿಯೋಜಿಸಿದ್ದು. ರಿಕ್ಷಾ ನಂಬರ್ ಪತ್ತೆ ಹಚ್ಚಿದ ತಂಡ ಚಾಲಕನನ್ನು ಬಂಧಿಸಿದೆ. ಆರೋಪಿ ರಿಕ್ಷಾ ಚಾಲಕ ಅಕ್ಬರ್ ಸೈಯದ್ ಮುಂಬೈ ನಿವಾಸಿಯಾಗಿದ್ದು, ನಾಲ್ಕೈದು ತಿಂಗಳ ಹಿಂದೆ ಔರಂಗಾಬಾದ್ಗೆ ಬಂದು ಬಾಡಿಗೆಗೆ ರಿಕ್ಷಾ ಓಡಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
महाराष्ट्र : छात्रा से ड्राइवर ने पूछे अश्लील सवाल, चलते ऑटो से कूदी नाबालिग; 40 CCTV खंगाल पुलिस ने आरोपी को दबोचा pic.twitter.com/Ja7ekzpWEg
NDTV India (@ndtvindia) November 17, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ