ಗಡ್ಕರಿ ಕ್ಷಮೆಗೆ “ಮಹಾ’ಕಾಂಗ್ರೆಸ್ ಆಗ್ರಹ
Team Udayavani, Jan 13, 2018, 9:38 AM IST
ಮುಂಬಯಿ: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾರತೀಯ ನೌಕಾಪಡೆಯನ್ನು ಅವಮಾನಿಸಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಕಿಡಿಕಾರಿದೆ. ಅಲ್ಲದೆ, ಕೂಡಲೇ ಗಡ್ಕರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿದ್ದಾರೆ.
“ನೌಕಾಪಡೆ ಅಧಿಕಾರಿಗಳೆಲ್ಲ ಮುಂಬಯಿಯ ಸುಸಜ್ಜಿತ ಬಡಾವಣೆಗಳಲ್ಲೇ ವಾಸಿಸಲು ಇಚ್ಛಿಸುತ್ತಾರೆ. ನೌಕಾಪಡೆ ಅಧಿಕಾರಿಗಳಿಗೆ ಒಂದು ಇಂಚು ಭೂಮಿಯನ್ನೂ ನೀಡುವುದಿಲ್ಲ. ಬೇಕಿದ್ದರೆ ಪಾಕಿಸ್ಥಾನದ ಗಡಿಗೆ ಹೋಗಲಿ’ ಎಂದು ಗಡ್ಕರಿ ಗುರುವಾರ ಹೇಳಿಕೆ ನೀಡಿದ್ದರು. ನಾವು ಈ ಹೇಳಿಕೆಯನ್ನು ಖಂಡಿಸು ತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.
ದಕ್ಷಿಣ ಮುಂಬಯಿಯ ಕರಾವಳಿಯಲ್ಲಿ ತೇಲುವ ಹೋಟೆಲ್ ಮತ್ತು ತೇಲುವ ಜೆಟ್ಟಿ ನಿರ್ಮಿಸುವ ಯೋಜನೆಯ ಪ್ರಸ್ತಾವವನ್ನು ನೌಕಾಪಡೆ ತಿರಸ್ಕರಿಸಿದ ಬಳಿಕ ಗಡ್ಕರಿ ತಮ್ಮ ಅಸಮಾಧಾನವನ್ನು ಹೀಗೆ ಹೊರಹಾಕಿದ್ದರು.