ಮೈಸೂರಿನ ಯುವಕನಿಗೆ ಗಿಫ್ಟ್ ನೀಡಿದ ಮಹಿಂದ್ರಾ
Team Udayavani, Oct 24, 2019, 3:00 AM IST
ನವದೆಹಲಿ: ಕಳೆದ ವರ್ಷ, ತಮ್ಮ ತಾಯಿಯನ್ನು ತಮ್ಮ ಹಳೆಯ ಸ್ಕೂಟರಿನ ಮೇಲೆ ಕೂರಿಸಿಕೊಂಡು ಇಡೀ ದೇಶವನ್ನೇ ಸುತ್ತಿ ಬಂದು ಸುದ್ದಿಯಾಗಿದ್ದ ಮೈಸೂರಿನ ಡಿ. ಕೃಷ್ಣ ಕುಮಾರ್ರವರ (39) ಮಾತೃಪ್ರೇಮವನ್ನು ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಮೆಚ್ಚಿಕೊಂಡಿದ್ದು, ಕೃಷ್ಣಕುಮಾರ್ರವರಿಗೆ “ಮಹಿಂದ್ರಾ ಎಕ್ಸ್ಯುವಿ 100 ಎನ್ಎಕ್ಸ್ಟಿ’ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ದೇಶದ ಎಲ್ಲಾ ಪುಣ್ಯಕ್ಷೇತ್ರಗಳನ್ನು ನೋಡುವ ತನ್ನ ತಾಯಿಯ ಆಸೆ ಪೂರೈಸಲೆಂದೇ ತಾವು ಮಾಡುತ್ತಿದ್ದ ಬ್ಯಾಂಕ್ ನೌಕರಿಯನ್ನು ಬಿಟ್ಟು, ತಾಯಿಯನ್ನು ತನ್ನ 20 ವರ್ಷದಷ್ಟು ಹಳೆಯಾದ ಬಜಾಜ್ ಸ್ಕೂಟರಿನ ಮೇಲೆ 48,000 ಕಿ.ಮೀ. ಪ್ರಯಾಣ ಮಾಡಿದ್ದರು
ಕೃಷ್ಣಕುಮಾರ್. ಅವರ ವಿಚಾರವನ್ನು ಇತ್ತೀಚೆಗೆ ತಮ್ಮ ಸ್ನೇಹಿತ ಮನೋಜ್ ಕುಮಾರ್ ಎಂಬುವರ ಟ್ವೀಟ್ ಮೂಲಕ ತಿಳಿದ ಮಹಿಂದ್ರಾ, “”ಕೃಷ್ಣಕುಮಾರ್ರವರ ಮಾತೃಪ್ರೇಮ ಹಾಗೂ ದೇಶಪ್ರೇಮ ಎರಡೂ ಶ್ಲಾಘನೀಯ. ಅವರ ತಾಯಿಯವರ ಮುಂದಿನ ಪ್ರವಾಸಕ್ಕೆ ನಮ್ಮ ಕಂಪನಿಯ ಮಹಿಂದ್ರಾ ಎಕ್ಸ್ಯುವಿ 100 ಎನ್ಎಕ್ಸ್ಟಿ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್