ನೀರಾವರಿ ಹಗರಣ: ಅಜಿತ್ ಪವಾರ್ಗೆ ಮತ್ತೆ ಕ್ಲೀನ್ಚಿಟ್
Team Udayavani, Dec 20, 2019, 8:00 PM IST
ಮುಂಬೈ: ವಿದರ್ಭ ನೀರಾವರಿ ಅಭಿವೃದ್ಧಿ ಮಂಡಳಿಯ(ವಿಐಡಿಸಿ) 12 ಯೋಜನೆಗಳಲ್ಲಿ ಹಗರಣ ನಡೆಸಿರುವ ಆಪಾದನೆ ಹೊತ್ತಿದ್ದ ಎನ್ಸಿಪಿ ಹಿರಿಯ ಮುಖಂಡ ಅಜಿತ್ ಪವಾರ್ಗೆ ಮಹಾರಾಷ್ಟ್ರದ ಎಸಿಬಿ ಕ್ಲೀನ್ಚಿಟ್ ನೀಡಿದೆ.
ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠಕ್ಕೆ ಭ್ರಷ್ಟಾಚಾರ ನಿಗ್ರಹ ದಳ ಡಿ.19ರಂದು ಸಲ್ಲಿಸಿರುವ ಅಫಿಡವಿಟ್ನಲ್ಲಿ ಕ್ಲೀನ್ಚಿಟ್ ನೀಡಿದೆ. ತನಿಖಾ ವರದಿಯಲ್ಲಿ ಯಾವುದೇ ಅಕ್ರಮ ಎಸಗಿರುವುದು ಕಂಡು ಬಂದಿಲ್ಲ ಎಂದು ತಿಳಿಸಿದೆ.
ನ.27ರಂದು ವಿದರ್ಭ ಭಾಗದಲ್ಲಿ ಕೈಗೊಂಡಿದ್ದ ವಿವಿಧ ನೀರಾವರಿ ಯೋಜನೆಯ ಅವ್ಯವಹಾರ ಪ್ರಕರಣದಲ್ಲೂ ಪವಾರ್ಗೆ ಎಸಿಬಿ ಕ್ಲೀನ್ಚಿಟ್ ನೀಡಿತ್ತು. 1999-2009ರ ವೇಳೆ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ಸರ್ಕಾರದಲ್ಲಿ ಅಜಿತ್ ಪವಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಈ ಅವಧಿಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿದ್ದು, ಇದರಲ್ಲಿ ಎನ್ಸಿಪಿ ಪ್ರಮುಖ ಪಾತ್ರ ವಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ