ಮಲೇಷ್ಯಾ ತಾಳೆ ಎಣ್ಣೆಗೆ ತಡೆ?
Team Udayavani, Oct 12, 2019, 4:17 AM IST
ಸಾಂದರ್ಭಿಕ ಚಿತ್ರ
ಮುಂಬೈ: ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಪ್ರಮಾಣ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜತೆಗೆ ಇತರ ಸರಕುಗಳ ಆಮದು ಕೂಡ ಗಣನೀಯ ಪ್ರಮಾಣದಲ್ಲಿ ತಗ್ಗುವ ಸಾಧ್ಯತೆಗಳಿವೆ. ಭಾರತ ದಾಳಿ ನಡೆಸಿ ಜಮ್ಮು ಮತ್ತು ಕಾಶ್ಮೀರವನ್ನು ವಶಪಡಿಸಿಕೊಂಡಿದೆ ಎಂದು ಮಲೇಷ್ಯಾ ಪ್ರಧಾನಿ ಡಾ.ಮಹಾತಿರ್ ಮೊಹಮ್ಮದ್ ಹೇಳಿದ್ದಕ್ಕೆ ಖಂಡನಾತ್ಮಕ ಬೆಳವಣಿಗೆಯಾಗಿ ಈ ಕ್ರಮಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ. ಮಲೇಷ್ಯಾಕ್ಕೆ ಕಠಿಣ ಸಂದೇಶ ನೀಡುವುದು ಈ ಕ್ರಮದ ಉದ್ದೇಶ ಎಂದು ಅವರು ಹೇಳಿದ್ದಾರೆ. ಮಲೇಷ್ಯಾ ಬದಲಾಗಿ ಇಂಡೋನೇಷ್ಯಾ, ಅರ್ಜೆಂಟೀನಾ, ಉಕ್ರೇನ್ಗಳಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳಲು ಅವಕಾಶಗಳು ಇವೆಯೇ ಎಂಬ ಪರಾಮರ್ಶೆ ನಡೆದಿದೆ.