ಮೂವರನ್ನು ಸುಟ್ಟು ಕೊಂದ ಖತರ್ನಾಕ್ ಆರೋಪಿ ರೈಲಿನಿಂದ ಎಸ್ಕೇಪ್
Team Udayavani, Aug 10, 2018, 6:07 PM IST
ನಾಶಿಕ್ : ಮಹಾರಾಷ್ಟ್ರದ ನಾಶಿಕ್ನಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಶಿಶುವನ್ನು ಬೆಂಕಿ ಹಚ್ಚಿ ಸುಟ್ಟು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಉತ್ತರ ಪ್ರದೇಶದಿಂದ ಮರಳಿ ತರುವಾಗ ಆತ ರೈಲಿನಲ್ಲಿ ಎಸ್ಕೇಪ್ ಆದನೆಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕೊಲೆ ಆರೋಪಿ ಜಲಾಲುದ್ದೀನ್ ಖಾನ್ ಎಂಬಾತನು ಕಳೆದ ಬುಧವಾರ ರಾತ್ರಿ ಮಧ್ಯ ಪ್ರದೇಶದಲ್ಲಿ ಗಂಜ್ ಬಸೋಡಾ ಮತ್ತು ವಿದಿಷಾ ರೈಲು ನಿಲ್ದಾಣಗಳ ನಡುವೆ ಝೀಲಂ ಎಕ್ಸ್ಪ್ರೆಸ್ ರೈಲಿನಿಂದ ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಖಾನ್ ನನ್ನು ನಾಶಿಕ್ ಪೊಲೀಸರು ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯ ಕನೋಥಿಯಾ ಎಂಬ ಆತನ ಗ್ರಾಮದಿಂದ ಬಂಧಿಸಿ ರೈಲಿನಲ್ಲಿ ಕರೆತರುತ್ತಿದ್ದಾಗ ಆತ ಎಸ್ಕೇಪ್ ಆದ.
ಆರೋಪಿ ಖಾನ್ ರೈಲಿನಲ್ಲಿ ತನಗೆ ಶೌಚಾಲಯಕ್ಕೆ ಹೋಗುವುದಿದೆ ಎಂದು ಕಾವಲು ಪೊಲೀಸರಲ್ಲಿ ಹೇಳಿ ಹೋದಾಗ ರೈಲು ನಿಧಾನವಾಗುತ್ತಿರುವುದನ್ನು ಗಮನಿಸಿ ಕತ್ತಲೆಯ ಲಾಭ ಪಡೆದು ರೈಲಿನಿಂದ ಹೊರ ಜಿಗಿದು ಪರಾರಿಯಾದ.
ಖಾನ್ ರೈಲಿನಿಂದ ಜಿಗಿದೊಡನೆಯೇ ಇಬ್ಬರು ಕಾವಲು ಪೊಲೀಸರು ಕೂಡ ರೈಲಿನಿಂದ ಹೊರ ಜಿಗಿದರೂ ಅವರಿಗೆ ಖಾನ್ ನನ್ನು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪಂಚವಟಿ ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ಮಧುಕರ… ಕಾಡ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ