ಹಣ ಕದ್ದು ವಂಚಿಸಿದ ಆರೋಪಿ ಕೊಲೆ ಅಪರಾಧಿ ಎಂದು ಬಯಲಾಯಿತು
Team Udayavani, Jan 3, 2018, 12:17 PM IST
ಥಾಣೆ : ಬ್ಯಾಂಕ್ ಗ್ರಾಹಕರಿಗೆ ನೆರವಾಗುವ ನೆಪದಲ್ಲಿ ಅವರ ಬಳಿ ಇದ್ದ ಹಣ ಕದ್ದು ವಂಚಿಸಿದ ಆರೋಪದಲ್ಲಿ ಇತರಿಬ್ಬರೊಂದಿಗೆ ಬಂಧಿಸಲ್ಪಟ್ಟ 28ರ ಹರೆಯದ ಕಳ್ಳನೋರ್ವ ತನಿಖೆಯ ವೇಳೆ ಗುಜರಾತ್ನಿಂದ ಪರಾರಿಯಾಗಿರುವ ಕೊಲೆ ಅಪರಾಧಿಎಂದು ಗೊತ್ತಾಯಿತು ಎಂಬುದಾಗಿ ಮಹಾರಾಷ್ಟ್ರದ ಪಾಲಗಢ ಪೊಲೀಸರು ತಿಳಿಸಿದ್ದಾರೆ.
ಮಿತೇಶ್ ಅಲಿಯಾಸ್ ರಾಹುಲ್ ಅಲಿಯಾಸ್ ಖಾತಿಯಾವಾಡಿ ವಾಮನ ರಾಠೊಡ್ ಎಂಬಾತನು ಮೂಲತಃ ಭಾವನಗರದವ. ಆತನನ್ನು 2009ರಲ್ಲಿ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಜೈಲಿಗೆ ಹಾಕಲಾಗಿತ್ತು ಎಂದು ಪಾಲಗಢ ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ರಾಜ್ ತಿಲಕ್ ರೋಶನ್ ತಿಳಿಸಿದ್ದಾರೆ.
2,000 ಮತ್ತು 500 ರೂ. ನೋಟುಗಳನ್ನು ಖಾತೆಗೆ ಜಮೆ ಮಾಡುವ ಮುನ್ನ ಅವುಗಳ ಸೀರಿಯಲ್ ನಂಬರ್ ಬರೆದುಕೊಡಲು ನೆರವಾಗುವ ನೆಪದಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಗ್ರಾಹಕರನ್ನು ವಂಚಿಸಿದ್ದರೆಂಬ ಬಗ್ಗೆ ಪಾಲಗಢ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಕೊಲೆ ಅಪರಾಧಿ ಮಿತೇಶ್ ಅಲಿಯಾಸ್ ರಾಹುಲ್ ಅಲಿಯಾಸ್ ಖಾತಿಯಾವಾಡಿ ವಾಮನ ರಾಠೊಡ್ ಸಿಕ್ಕಿಬಿದಿದ್ದ.
ಈತನೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಇನ್ನಿಬ್ಬರೆಂದರೆ ಚಂದ್ರಕಾಂತ ದಾಸವತೆ 28, ಮತ್ತು ವಿಷ್ಣುದತ್ ಅಲಿಯಾಸ್ ಸಂಜಯ್ ಶುಕ್ಲಾ 27.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ