4ಕೆಜಿ ಮರಳು ಕೊಟ್ಟು ಚಿನ್ನದ ವ್ಯಾಪಾರಿಗೇ 50 ಲಕ್ಷ ರೂಪಾಯಿ ವಂಚಿಸಿದ! ಏನಿದು ಘಟನೆ
ದಿನ ಕಳೆದಂತೆ ಈ ವ್ಯಕ್ತಿ ಚಿನ್ನದ ವ್ಯಾಪಾರಿಯ ಕುಟುಂಬಕ್ಕೂ ಆಪ್ತನಾಗಿದ್ದ.
Team Udayavani, Jan 23, 2021, 12:38 PM IST
Representative Image
ಮಹಾರಾಷ್ಟ್ರ:ಪುಣೆಯ ಚಿನ್ನದ ವ್ಯಾಪಾರಿಯೊಬ್ಬರು “ನಾಲ್ಕು ಕೆಜಿ ಮ್ಯಾಜಿಕ್ ಮರಳು” ಖರೀದಿಸುವ ಮೂಲಕ ವ್ಯಕ್ತಿಯೊಬ್ಬ 50 ಲಕ್ಷ ರೂಪಾಯಿ ವಂಚಿಸಿರುವುದಾಗಿ ವರದಿ ತಿಳಿಸಿದೆ. ಇದೊಂದು ಬಂಗಾಳದಲ್ಲಿ ದೊರೆತ ಅಪರೂಪದ ಮರಳು ಎಂದು ಹೇಳಿ ಚಿನ್ನದ ವ್ಯಾಪಾರಿಯನ್ನು ನಂಬಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ದೇಶದ ಭದ್ರತಾ ವಿಚಾರ ಸೋರಿಕೆಯಾಗಿರುವುದು ಖಂಡನೀಯ: ಪ್ರಕಾಶ್ ರಾಠೋಡ್
ಏನಿದು ವಂಚನೆ ಘಟನೆ?
ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಪುಣೆಯ ಹದಾಸ್ ಪುರ್ ಚಿನ್ನದ ವ್ಯಾಪಾರಿ ನೀಡಿರುವ ದೂರಿನ ಪ್ರಕಾರ, ಸುಮಾರು ಒಂದು ವರ್ಷದಿಂದ ಪರಿಚಿತನಾಗಿದ್ದ ಆರೋಪಿ ಜ್ಯುವೆಲ್ಲರಿ ಶಾಪ್ ಗೆ ಭೇಟಿ ನೀಡುತ್ತಿದ್ದ. ಹೀಗೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ದಿನ ಕಳೆದಂತೆ ಈ ವ್ಯಕ್ತಿ ಚಿನ್ನದ ವ್ಯಾಪಾರಿಯ ಕುಟುಂಬಕ್ಕೂ ಆಪ್ತನಾಗಿದ್ದ. ನಂತರ ಅವರಿಗೆ ಡೈರಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ.
ಇತ್ತೀಚೆಗೆ 4 ಕೆಜಿ ಮರಳು ತುಂಬಿದ್ದ ಚೀಲವನ್ನು ತಂದು ಕೊಟ್ಟು, ಇದನ್ನು ತಾನು ಬಂಗಾಳದಿಂದ ತಂದಿದ್ದು, ಈ ವಿಶೇಷವಾದ ಮರಳನ್ನು ವಿಪರೀತವಾಗಿ ಕಾಯಿಸಿದಾಗ ಚಿನ್ನವಾಗಿ ಮಾರ್ಪಾಡಾಗುತ್ತದೆ ಎಂದು ತಿಳಿಸಿದ್ದ. ಇದನ್ನು ನಂಬಿದ ಚಿನ್ನದ ವ್ಯಾಪಾರಿ 30 ಲಕ್ಷ ರೂಪಾಯಿ ನಗದು ಹಾಗೂ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ನೀಡಿರುವುದಾಗಿ ತಿಳಿಸಿದ್ದಾರೆ.
ಕೊನೆಗೂ ಮರಳಿನಿಂದ ಚಿನ್ನ ಪಡೆಯುವ ಆಸೆಯಿಂದ ವ್ಯಾಪಾರಿ ಮರಳನ್ನು ಬೆಂಕಿಯಿಂದ ಕಾಯಿಸಿದ್ದ. ಆದರೆ ಮರಳು ಬಿಸಿಯಾಯ್ತೇ ವಿನಃ, ಚಿನ್ನವಾಗಿ ಪರಿವರ್ತನೆಯಾಗಿಲ್ಲ. ಆಗ ತಾನು ಮೋಸ ಹೋಗಿರುವುದಾಗಿ ಚಿನ್ನದ ವ್ಯಾಪಾರಿಗೆ ಮನವರಿಕೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 420(ಮೋಸ, ವಂಚನೆ), 406 (ವಿಶ್ವಾಸದ್ರೋಹ), 34ರ ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ