ಪ್ರೀತಿಸಿ ಮದುವೆಯಾದ ಮಗಳು ಮತ್ತು ಅಳಿಯನನ್ನು ಕೊಚ್ಚಿ ಕೊಂದ ತಂದೆ
Team Udayavani, Jul 26, 2022, 2:15 PM IST
ತಮಿಳುನಾಡು: ತನ್ನ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾದ ಮಗಳು ಮತ್ತು ಅಳಿಯನನ್ನು ತಂದೆಯೊಬ್ಬ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ವೀರಪಟ್ಟಿಯ ಕೊವಿಲ್ಪಟ್ಟಿ ಎಂಬಲ್ಲಿ ನಡೆದಿದೆ.
ಮಗಳು ರೇಷ್ಮಾ (20) ಹಾಗೂ ಅಳಿಯ ಮನಿಕರಾಜ್(26) ಕೊಲೆಯಾದವರು. ತಂದೆ ಮುತ್ತುಕುಟ್ಟಿ ಕೊಲೆ ಮಾಡಿದ ವ್ಯಕ್ತಿ.
ಮಗಳು ರೇಷ್ಮಾ ಪ್ರೀತಿಯ ವಿಚಾರದಲ್ಲಿ ತಂದೆಯ ವಿರೋಧವಿತ್ತು. ತನ್ನ ತಂದೆ ಪ್ರೀತಿಗೆ ಒಪ್ಪದ ಕಾರಣ ರೇಷ್ಮಾ ಹಾಗೂ ಮನಿಕರಾಜ್ ಕೆಲ ದಿನಗಳ ಹಿಂದೆ ಮದುವೆಯಾಗಿ, ಕಳೆದ ಎರಡು ದಿನದ ಹಿಂದೆ ಊರಿಗೆ ಆಗಮಿಸಿದ್ದರು.
ಈ ಮದುವೆಗೆ ತಂದೆ ಮುತ್ತು ಕುಟ್ಟಿ ತೀವ್ರ ವಿರೋಧ ವ್ಯಕ್ಯಪಡಿಸಿದ್ದರು. ಬಳಿಕ ಪಂಚಾಯತ್ ನ ಮಾತುಕತೆ ಮೂಲಕ ದಂಪತಿಗೆ ಗ್ರಾಮದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಯಿತು. ಆದರೂ ತಂದೆಗೆ ಮಗಳ ಬಗ್ಗೆ ಸಿಟ್ಟಿತ್ತು.
ಸೋಮವಾರ ಸಂಜೆ ಇದೇ ಸಿಟ್ಟಿನಲ್ಲಿ ಮನೆಯಲ್ಲಿ ಮಗಳು ಮತ್ತು ಅಳಿಯ ಇಬ್ಬರೇ ಇದ್ದ ಸಂದರ್ಭದಲ್ಲಿ ಮುತ್ತುಕಟ್ಟಿ ಇಬ್ಬರ ಮೇಲೆ ಹಲ್ಲೆ ಮಾಡಿ, ಬಳಿಕ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿ ಆಗಿದ್ದಾನೆ.
ಘಟನೆ ತಿಳಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್
ಛತ್ತೀಸ್ಗಢದ ಕಂಕೇರ್ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ
Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು
Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್ ಮುಳುಗಡೆ; ಹಲವರು ನಾಪತ್ತೆ
Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
IPL ಗುಜರಾತ್ ಟೈಟಾನ್ಸ್ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲುವು ಅನಿವಾರ್ಯ
B. S. Yediyurappa ಪುತ್ರ ಎಂದು ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ: ವಿಜಯೇಂದ್ರ
Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ
Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ
Lok Sabha Polls; ಎ. 24: ಉಡುಪಿಗೆ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್