ಪೂರ್ವನಿಯೋಜಿತ ಕೊಲೆ; ಆಸ್ತಿಗಾಗಿ ಮಗ, ಸೊಸೆ, ಮೊಮ್ಮಕ್ಕಳನ್ನು ಜೀವಂತ ದಹನ ಮಾಡಿದ ವೃದ್ಧ
Team Udayavani, Mar 19, 2022, 3:21 PM IST
ಇಡುಕ್ಕಿ: ಆಸ್ತಿ ವಿಚಾರದ ಗಲಾಟೆಯ ಪರಿಣಾಮ ವೃದ್ಧರೊಬ್ಬರು ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ಜೀವಂತವಾಗಿ ದಹನ ಮಾಡಿದ ಆಘಾತಕಾರಿ ಘಟನೆ ಕೇರಳ ರಾಜ್ಯದ ಇಡುಕ್ಕಿಯಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಳಗೆ ಮಲಗಿದ್ದ ಆರೋಪಿಯ ಮಗ, ಸೊಸೆ ಮತ್ತು ಶಾಲೆಗೆ ಹೋಗುತ್ತಿದ್ದ ಇಬ್ಬರು ಮೊಮ್ಮಗಳು ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ 79 ವರ್ಷದ ಹಮೀದ್, ಹೊರಗಿನಿಂದ ಮನೆಗೆ ಬೀಗ ಹಾಕಿದ ನಂತರ ಕಿಟಕಿಯ ಮೂಲಕ ಪೆಟ್ರೋಲ್ ತುಂಬಿದ ಸಣ್ಣ ಬಾಟಲಿಗಳನ್ನು ಮನೆಯೊಳಗೆ ಎಸೆದಿದ್ದಾನೆ. ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾನೆ.
ಮನೆಯೊಳಗೆ ಮಲಗಿದ್ದವರಿಗೆ ಬೆಂಕಿಯ ಬಗ್ಗೆ ತಿಳಿಯುತ್ತಿದ್ದಂತೆ ಬೊಬ್ಬೆ ಹಾಕಲಾರಂಭಿಸಿದ್ದರು. ನೆರೆಹೊರೆಯವರು ಕೂಡಲೇ ಸ್ಥಳಕ್ಕೆ ಬಂದರಾದರೂ ಭಾರೀ ಬೆಂಕಿಯ ಜ್ವಾಲೆಯ ಕಾರಣದಿಂದ ರಕ್ಷಣೆ ಮಾಡಲಾಗಲಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಲ್ಟಿಯಾದ ಖಾಸಗಿ ಬಸ್; ಎಂಟು ಮಂದಿಗೆ ಗಾಯ!
“ಇದು ಸಂಪೂರ್ಣ ಪೂರ್ವನಿಯೋಜಿತ ಅಪರಾಧ ಕೃತ್ಯ. ಆರೋಪಿ ಹಮೀದ್ ಕನಿಷ್ಠ ಐದು ಬಾಟಲಿಗಳಲ್ಲಿ ಪೆಟ್ರೋಲ್ ಶೇಖರಣೆ ಮಾಡಿದ್ದ. ಮನೆಯ ನೀರಿನ ತೊಟ್ಟಿಯನ್ನು ಖಾಲಿ ಮಾಡಿದ್ದ. ಅದಲ್ಲದೆ ನೆರೆಹೊರೆಯವರು ಬಾವಿಯಿಂದ ನೇರು ಸೇದಬಾರದು ಎಂದು ಮನೆಯ ಬಾವಿಯ ಹಗ್ಗ ಮತ್ತು ಬಕೆಟ್ ಗಳನ್ನೂ ಆರೋಪಿ ತಪ್ಪಿಸಿ ಇಟ್ಟಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.
“ತಂದೆ ಮತ್ತು ಕಿರಿಯ ಮಗಳ ಸುಟ್ಟ ದೇಹಗಳು ಒಬ್ಬರನ್ನೊಬ್ಬರು ಬಿಗಿಯಾಗಿ ತಬ್ಬಿಕೊಂಡಿರುವುದು ಕಂಡುಬಂದಿತ್ತು. ಮರಣೋತ್ತರ ಪರೀಕ್ಷೆಗೆ ದೇಹವನ್ನು ಕಳುಹಿಸಿಕೊಡುವ ಸಲುವಾಗಿ ಈ ತಂದೆ-ಮಗಳ ದೇಹಗಳನ್ನು ಪ್ರತ್ಯೇಕ ಮಾಡಲು ಕಷ್ಟವಾಗಿತ್ತು” ಎಂದು ಪೊಲೀಸರು ಘಟನೆಗೆ ಭೀಕರತೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಪೊಲೀಸರು ಆರೋಪಿ ಹಮೀದ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಮನೆ ಮತ್ತು ಆಸ್ತಿ ವಿಚಾರಕ್ಕೆ ಪುತ್ರನೊಂದಿಗಿನ ಕಲಹದಿಂದ ತಾನು ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ